ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ ಕಾಪಿಗುಡ್ಡೆ ಅಯ್ಯಪ್ಪ ಮಂದಿರದ ಮೇಲ್ಚಾವಣಿ ಲೋಕಾರ್ಪಣೆ
ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ.ಭರತ್ ಶೆಟ್ಟಿ ಅವರು 35 ಲಕ್ಷದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಾದ ಅಕಾಶಭವನ ಲಾಸ್ಟ್ ಸ್ಟಾಪ್ ಬಳಿ ಅಡ್ಡ ರಸ್ತೆ 15 ಲಕ್ಷ ,ಕಾಪಿಗುಡ್ಡೆ ಲಕ್ಷ್ಮಣ ನಾಯರ್ ಮನೆಯ ಬಳಿ ಕಾಂಕ್ರಿಟ್ ರಸ್ತೆ 10 ಲಕ್ಷ,ಮಂಜಲ ಕಟ್ಟೆ ಕಾಂಕ್ರಿಟ್ ರಸ್ತೆ ವಿಸ್ತರಣೆ 5 ಲಕ್ಷ ,ಶಿವನಗರ 4 ನೆಯ ಅಡ್ಡ ರಸ್ತೆಗೆ ಕಾಂಕ್ರಿಟ್ 5 ಲಕ್ಷದ ಕಾಮಗಾರಿಗಳಿಗೆ ಇಂದು ಗುದ್ದಲಿ ಪೂಜೆ ಹಾಗೂ ಕಾಪಿಗುಡ್ಡೆ ಶ್ರೀ ಅಯ್ಯಪ್ಪ ಮಂದಿರದ ಮೇಲ್ಚಾವಣಿ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಗಾಯತ್ರಿ ರಾವ್, ನಿಕಟಪೂರ್ವ ಮೇಯರ್ ದಿವಾಕರ್ ಪಾಂಡೇಶ್ವರ ಬಿಜೆಪಿ ಮಂಡಲ ಎಸ್.ಸಿ ಮೋರ್ಚಾ ಅಧ್ಯಕ್ಷ ಆನಂದ ಪಾಂಗಳ,ಮಂಡಲ ಪ್ರಕೋಷ್ಠ ದ ಸಂಚಾಲಕರಾದ ಕೊರಗಪ್ಪ ಶೆಟ್ಟಿ ಬಿಜೆಪಿ ಮಂಡಲ ಕಾರ್ಯದರ್ಶಿ ಸುಚೇತನ್ ಪೂಜಾರಿ, ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ,ಶಕ್ತಿ ಕೇಂದ್ರದ ಪ್ರಮುಖ್ ಶೇಖರ್ ಕುಲಾಲ್,ಬಿಜೆಪಿ ಜಿಲ್ಲಾ ಯುವ ಮೋರ್ಚಾ ಖಜಾಂಜಿ ರಕ್ಷಿತ್ ಪೂಜಾರಿ, ಸಹ ಪ್ರಮುಖ್ ಚರಿತ್ ರಾಜ್,ಮಂಡಲ ಪ್ರಕೋಷ್ಟದ ಸಹ ಸಂಚಾಲಕ ಅಶ್ವಿನ್ ಅಮೀನ್,ಪಕ್ಷದ ಪ್ರಮುಖರಾದ ಸಂದೇಶ್ ಶೆಟ್ಟಿ,ಉಮೇಶ್ ಪೂಜಾರಿ, ಜಗದೀಶ್ ಅಮೀನ್,ಹರೀಶ್ ದೇವಾಡಿಗ,ಪ್ರಶಾಂತ್ ಶೆಟ್ಟಿಗಾರ್,ಸುಹಾನ್,ಸುಕೇಶ್,ಲಕ್ಷ್ಮಣ ನಾಯರ್,ಗಣೇಶ್,ನಾರಾಯಣ ಶೆಟ್ಟಿ,ಉದಯ ಪೂಜಾರಿ,ಬೂತ್ ಅಧ್ಯಕ್ಷ ರಾದ ಜಯರಾಮ್ ಕೋಟ್ಯಾನ್,ಲತೀಶ್ ಗಾಣಿಗ,ಮೋಹನ್ ಕುಂದರ್,ಸಚಿನ್ ಶೆಟ್ಟಿ ಶಿವಾನಂದ ಪೂಜಾರಿ, ಸ್ಥಳೀಯ ನಿವಾಸಿಗಳು, ಕಾಪಿಗುಡ್ಡೆ ಮಂದಿರದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.