ವೈದ್ಯಲೋಕ ಕೈಬಿಟ್ಟ ಪ್ರಕರಣ : ಹರಕೆ ಹೇಳಿದ ಒಂದೇ ವಾರದಲ್ಲಿ ನಡೆಯಿತು ಪವಾಡ..!!!

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಗೌರಿನಿಲಯ ನಿವಾಸಿ 48 ವರ್ಷದ ವಾಸುದೇವಾ ನಾಯಕ್ ಅವರು ವ್ಯಾವಹಾರವನ್ನು ಮಾಡುತ್ತಿದ್ದರು ಇವರಿಗೆ ಆರೋಗ್ಯದಲ್ಲಿ ಎಲ್ಲವೂ ಸರಿಯಿತ್ತು ಆದ್ರೆ ಇವರಿಗೆ ಏಕಾಏಕಿ ಹೃದಯ ಸಂಬಂದ ಸಮಸ್ಯೆಯಿಂದ ಬಳಳುತ್ತಿದ್ದು ಕಳೆದ ನವೆಂಬರ್ 18 ರಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಾರಂಭವಾಗುತ್ತು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿತ್ತು ಈ ಚಿಕಿತ್ಸೆ ನಡೆದ ನಂತರ ವಾಸು ಅವರಿಗೆ ಮಾತನಾಡಲು ಬರುತ್ತಿರಲ್ಲಿಲ್ಲ ಆಸ್ಪತ್ರೆಯಲ್ಲಿ ವೈದ್ಯರು ನಿಮಗೆ ಇನ್ನೂ ಮುಂದೆ ಮಾತಾನಾಡಲು ಅಸಾಧ್ಯ ಎಂದು ಹೇಳಿದರು.

ಇದರಿಂದ ಗಾಬರಿಗೊಂಡ ಮನೆಯವರು ಸ್ನೇಹಿತರ ಮಾತಿನಂತೆ ಬೆಳ್ತಂಗಡಿ ತಾಲೂಕಿನ ಬೆಳಾಲುನಲ್ಲಿರುವ ಅರಿಕೊಡಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬಂದು ಹರಕೆಯನ್ನು ಹೇಳುತ್ತಾರೆ ವಾಸುರವರಿಗೆ ಮಾತು ಬಂದಲ್ಲಿ ವಜ್ರದ ಮುಗುತ್ತಿ ಕೊಡುತ್ತೇನೆ ಎಂದು ಹರಕೆ ಹೇಳುತ್ತಾರೆ ಅದರಂತೆ ಹರಕೆ ಹೇಳಿದ ಒಂದೇ ವಾರದಲ್ಲಿ ಮಾತು ಬಂದು ಬಂದಿದೆ.

ಇನ್ನೂ ಅರಿಕೋಡಿ ದೇವಸ್ಥಾನದ ವಿಸ್ಮಯ ಕಂಡು ಮರುದಿನವೇ ಅರಿಕೊಡಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ದೇವರಿಗೆ ವಜ್ರದ ಮುಗುತ್ತಿ ನೀಡಿ ಹರಕೆ ತಿರಿಸಿದ್ದಾರೆ ಒಟ್ಟಿನಲ್ಲಿ ಅರಿಕೊಡಿ ದೇವಸ್ಥಾನದಲ್ಲಿ ವೈದ್ಯರು ಕೈಬಿಟ್ಟ ಹಲವು ರೋಗಿಗಳಿಗೆ ಚಾಮುಂಡೇಶ್ವರಿ ದೇವಿ ಅಚ್ಚರಿ ಮೂಡಿಸಿ ಸಮಸ್ಯೆಯನ್ನು ನಿವಾರಿಸಿ ಮರುಜೀವ ನೀಡಿದ್ದಾಳೆ.
