ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಉದ್ಯಮಶೀಲತೆ ಮತ್ತು ನಾವೀನ್ಯತೆಯ ಕುರಿತು ಸಮೂಹ ಚರ್ಚೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು(ಸ್ವಾಯುತ್ರ), ವ್ಯವಹಾರ ಆಡಳಿತ ವಿಭಾಗದ ಆಶ್ರಯದಲಿ.. “ಉದ್ರಮಶೀಲತೆ ಮತ್ತು ನಾವೀನ್ಯತೆಯ ಅನುಭವಾತ್ಮಕ ಸಮೂಹ ಚರ್ಚೆ” ಪ್ರಾಯೋಗಿಕ ತರಬೇತಿ ಕಾರ್ಯಕ್ರಮವನ್ನು
ಸಂಪನ್ಮೂಲ ವ್ಯಕ್ತಿಯಾದ ಜೇಸಿ ಕೃಷ್ಣಮೋಹನ್ ಅವರು ಮೊದಲಿಗೆ ಪದವಿ ಶಿಕ್ಷಣದ ನಂತರ ಸ್ಪರ್ಧಾತ್ಮಕ ಜಗತ್ತಿನಲಿ. ಮುಂದುವರೆಯಲು ಅಳವಡಿಸಿಕೊಳ್ಳಬೇಕಾದ ಜೀವನ ಮೌಲ್ಯಗಳು ಹಾಗೂ ಉದ್ಯೋಗವಕಾಶಗಳ ಬಗ್ಗೆ, ಅರಿತು ಭಾನ ಸಂಪಾದಿಸಲು ಇರುವ ಮೂಲಗಳ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊರವರು ಮಾತನಾಡಿ ‘ಗುಂಪು ಚರ್ಚಿಯು ಇಂದಿನ ಪ್ರತಿ ಪರ ಕ್ಷೇತ್ರದಲ್ಲಿ ಅವಾರ ಮಹತ್ವವನ್ನು ಹೊಂದಿರುವ ಕೌಶಲ್ಯ, ಕಾರ್ಪೊರೇಟ್ಟಲಯದಲಿ ಪರಿಣಾಮಕಾರಿಯಾಗಿ ಸಂವಹನ ನಡೆಸುವ, ವಿಮರ್ಶಾತ್ಮಕವಾಗಿ ಯೋಚಿಸುವ ಮತ್ತು ವಿದ್ಯಾರ್ಥಿಗಳಿಗೆ ಅವರ ಆಲೋಚನೆಗಳನ್ನು ಆತ್ಮವಿಶ್ವಾಸದಿಂದ ಪ್ರಸ್ತುತಪಡಿಸಲು ಮತ್ತು ಸಮರ್ಥಿಸಿಕೊಳ್ಳಲು ಸಂವಹನವು ಮಹತ್ವದ ಪಾತ್ರ ವಹಿಸುತ್ತಿದೆ. ಈ ರೀತಿಯ ಕಾರ್ಯಕ್ರಮಗಳು ನಿಮಗೆ ಭದ್ರ ತಳಪಾಯವನ್ನು ಹಾಕಿ ಉದ್ಯೋಗ ಕ್ಷೇತ್ರದ ಬೇಡಿಕೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ದಪಡಿಸುತ್ತವೆ, ಪರಿಣಾಮಕಾರಿಯಾಗಿ ಸಹಕರಿಸುವ ಸಾಮರ್ಥ್ಯವು ಯಶಸ್ಸಿನ ಪ್ರಮುಖ ಹಾಗೂ ನಿರ್ಣಾಯಕವಾದ ಹಂತವಾಗಿದೆ ಎಂದು ಹೇಳಿದರು.

ಕಳೆದ ಎರಡು ವರ್ಷಗಳಿಂದ ವ್ಯವಹಾರ ಆಡಳಿತ ವಿಭಾಗವು ಐಸಿಎಸ್ ಮನ ಸಹಯೋಗದಿಂದ ಬಿಬಿಎ ವಿದ್ಯಾರ್ಥಿಗಳಿಗೆ ಕಂಪನಿ ಸೆಕ್ರೆಟರಿ ಶೋಸ್ ಗೆ ಸೇರ್ಪಡೆಗೊಳ್ಳಲು ತರಬೇತಿ ನೀಡುತ್ತಿದೆ ಮುಂದಿನ ಶೈಕ್ಷಣಿಕ ಪರಿಚಯಿಸುತ್ತಿದ್ದೆವೆ ಎಂಬ ಸುದ್ದಿಯನ್ನು ಹಂಚಿಕೊಂಡರು.

ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದ ಜೇಸಿ ಕೃಷ್ಣ ಮೋಹನ್ ಅವರ ಪ್ರಾಯೋಗಿಕ ತರಬೇತಿ ಅಧಿವೇಶನದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ಅನುಭವದ ಮೂಲಕ ಕಲಿಯುವ ಅವಕಾಶವನ್ನು ಪಡೆದರು ಗುಂಪು ಚರ್ಚೆರು ಪ್ರಾಥಮಿಕ ಸಿದ್ಧಾಂತಗಳನ್ನು ವಿವರಿಸಿದ ಬಳಿಕ ಅವರು ವಿದ್ಯಾರ್ಥಿಗಳನ್ನು ವಿವಿಧ ತಂಡಗಳಾಗಿ ವಿಂಗಡಿಸಿ ಪ್ರಾಯೋಗಿಕ ಚಟುವಟಿಕೆಗೆ ಮುನ್ನಡೆಸಿದರು.

ಪತಿ ತಂಡಕ್ಕೆ ನಾವುನ್ಯತೆ ಮತ್ತು ಉದ್ಯಮಶೀಲತೆ ಸಂಬಂಧಿತ ಒಂದು ಪ್ರಸ್ತುತ ಸಮಸ್ಯೆ ಅಥವಾ ಯೋಚನಾ ಪ್ರೇರಿತ ವಿಷಯ ನೀಡಲಾಯಿತು. ಸಮಸ್ಯಾ ಪರಿಹಾರ, ನಾವೀನ್ಯತೆ, ತಂಡದ ಸಹಕಾರ ಸಮರ್ಥ ವಾಗಿತ್ವ ಮತ್ತು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಎಂಬ ಅಂಶಗಳನ್ನು ಗಮನದಲಿ ಟ್ಟುಕೊಂಡು ಚರ್ಚೆ ನಡೆಸಲು ಪ್ರೇರೇಪಿಸಲಾಯಿತು

ವಿದ್ಯಾರ್ಥಿಗಳು ಆಲೋಚನೆ, ತರ್ಕ ಮತ್ತು ಉಪಪತ್ರಿಗಳನ್ನು ಬಳಸಿಕೊಂಡು ತಮ್ಮ ಅಭಿಪ್ರಾಯಗಳನ್ನು ಪ್ರಸ್ತುತಪಡಿಸಿದರು, ಕೆಲವು ತಂಡಗಳು ಚಿಂತನೆಗೆ ಧಕ್ತ ನೀಡುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಹೊಸ ತಂತ್ರಗಳನ್ನು ನಿರೂಪಿಸಿದರೆ ಇನ್ನೂ ಕೆಲವು ತಂಡಗಳು ವಿವಾದಾತ್ಮಕ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ಒದಗಿಸುವ ಮೂಲಕ ಸಮರ್ಥ ಪ್ರತಿಭೆ ಪ್ರದರ್ಶಿಸಿದವು.

ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಮರಾದ ಡಾ| ರಾಧಾಕೃಷ್ಣ, ಗೌಡ ಹಾಗೂ ನಿರ್ವಹಣಾ ಸಂಘದ ಸಂಚಾಲಕಿಯಾದ ಪುಷ್ಪ ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಬಿಎ ವಿಭಾಗದ ಉಪನ್ಯಾಸಕಾರ ಪ್ರಶಾಂತ್ ರೈ ಹಾಗೂ ಅಭಿಷೇಕ್ ಸುವರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

add - Gujarati school

Related Posts

Leave a Reply

Your email address will not be published.