ಕುಟ್ರುಪ್ಪಾಡಿ ಗ್ರಾ.ಪಂ.ನ ಜಾಗಕ್ಕೆ ಅಗಳು ನಿರ್ಮಾಣಕ್ಕೆ ವಿರೋಧ : ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸ್ಥಗಿತಗೊಂಡ ಕಾರ್ಯಾಚರಣೆ

ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಹೊಸ್ಮಠ ಬಲ್ಯದಲ್ಲಿರುವ ಕಾಡಿಗೆ ಮನ್ನಾ ಜಾಗಕ್ಕೆ ಬೇಲಿ ನಿರ್ಮಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಅಗಳು ನಿರ್ಮಾಣಕ್ಕೆ ಮುಂದಾದಾಗ ಇಲ್ಲಿನ ಇನ್ನೊಂದು ಗುಂಪು ಅದಕ್ಕೆ ತೀವೃ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.

ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಪಂಚಾಯಿತಿಯವರು ಪಂಚಾಯಿತಿ ಅಧ್ಯಕ್ಷ ಮೋನಪ್ಪ ಗೌಡ(ಮೋಹನ ಗೌಡ) ಕೆರೆಕೋಡಿ ಅವರ ನೇತೃತ್ವದಲ್ಲಿ ಜೆಸಿಬಿ ತಂದು ಅಗಳು ನಿರ್ಮಾಣಕ್ಕೆ ಮುಂದಾದರು, ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಪಂಚಾಯಿತಿ ಕಾಂಗ್ರೇಸ್ ಬೆಂಬಲಿತ ಸದಸ್ಯ ಸುಧೀರ್ ದೇವಾಡಿಗ ಹಾಗೂ ಮಾಜಿ ಸದಸ್ಯ ಕ್ಸೇವಿಯರ್ ಬೇಬಿ ಅವರ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಪ್ರತಿರೋಧ ಒಡ್ಡಿತು. ಇಲ್ಲಿಸ್ಪಷ್ಠವಾಗಿ ಕಂಡುಬಂದಿರುವುದು ಪಂಚಾಯಿತಿಯವರು ದುರದ್ದೇಶದಿಂದ ಪಂಚಾಯಿತಿ ಒಡೆತನದ 4.29 ಸೆಂಟ್ಸ್ ಜಾಗದ ಹೊರತುಪಡಿಸಿ ಕೇವಲ ಸ್ವಲ್ಪ ಜಾಗವನ್ನು ಸ್ವಾಧೀನಪಡಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ, ಪಂ. ಒಡೆತನದ ಎಲ್ಲಾ ಜಾಗವನ್ನು ಗಡಿಗುರುತು ಮಾಡಿ ಬಳಿಕ ಅಗಳು ನಿರ್ಮಾಣ ಕಾರ್ಯ ಮಾಡಬೇಕು ಎಂದು ಅಗ್ರಹಿಸಿದರು.

ಕಡಬ ಠಾಣಾ ಎ.ಎಸ್.ಐ ಸುರೇಶ್ ಸಿ.ಟಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಇತ್ತಂಡಗಳ ಮಧ್ಯೆ ಮಾತುಕತೆ ನಡೆಸಿದರೂ ವಾಗ್ಯುದ್ಧ ತಾರಕಕ್ಕೇರಿತು. ಈ ಮಧ್ಯೆ ಕಾಂಗ್ರೇಸ್ ಮುಖಂಡರಾದ ರಾಯ್ ಅಬ್ರಹಾಂ ಹಾಗೂ ಸತೀಶ್ ನಾಯಕ್ ಮೇಲಿನ ಮನೆ ಬಂದು ಮಾತುಕತೆ ಮುಂದಾಗಿ ಗಡಿಗುರುತು ಮಾಡಿಯೇ ಸ್ವಾಧೀನಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು, ಇದರಿಂದ ಕೆಂಡಾಮoಡಲರಾದ ಪಂ.ಅಧ್ಯಕ್ಷರು ಇದು ನಮ್ಮ ಗ್ರಾಮದ ಸಮಸ್ಯೆ ಇದರಲ್ಲಿ ಬೇರೆ ಗ್ರಾಮದವರು ಬಂದು ತಲೆ ಹಾಕುವುದು ಬೇಡ , ನಮ್ಮ ಸಮಸ್ಯೆ ಪರಿಸಿಕೊಳ್ಳಲು ನಮಗೆ ಗೊತ್ತು, ಇಲ್ಲಿ ರಾಜಕೀಯ ಮಾಡುವುದು ಬೆಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಇತ್ತಂಡಗಳ ಮಧ್ಯೆ ಮಾತಿನ ಚಕಮುಖಿ ಬಿರುಸುಗೊಂಡಿತ್ತು. ಪೆÇೀಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಕೈಮೀರುವುದನ್ನು ತಪ್ಪಿಸಿದರು. ಬಳಿಕ ಸರ್ವೆ ಮಾಡಿಯೇ ಪಂ.ಜಾಗವನ್ನು ಸ್ವಾಧೀನಪಡಿಸಿಕೊಳ್ಳುವುದೆಂದು ನಿರ್ಧರಿಸಿ ಜೆಸಿಬಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಈ ಸಂದರ್ಭದಲ್ಲಿ ಇಲ್ಲಿನ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ಚಂದ್ರ ಶೆಟ್ಟಿ ಬೀರುಕ್ಕು. ಪಂಚಾಯಿತಿ ಉಪಾಧ್ಯಕ್ಷೆ ವಾಣಿ ನಾಗೇಶ್, ಸದಸ್ಯರಾದ ಮಹಮ್ಮದಾಲಿ, , ಕಿರಣ್ ಗೋಗಟೆ, ಸಂತೋಷ್ ದೋಳ, ಯಶೋಧಾ, ಸ್ವಪ್ನಾ ರಮೇಶ್ ಪಡ್ಯಾನೆ, ಸುಮಾನ , ಪಿಡಿಒ ಆನಂದ ಗೌಡ, ಮಾಜಿ ಸದಸ್ಯ ತನಿಯ ಸಂಪಡ್ಕ, ಪ್ರಮುಖರಾದ ಜಗನ್ನಾಥ ಪೂಜಾರಿ, ಅವಿನ್ ಪೂಜಾರಿ, ಆನಂದ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.