ವಿಶ್ವ ಆಂಟಿಮೈಕ್ರೊಬಿಯಲ್ ಜಾಗೃತಿ ಸಪ್ತಾಹ 2022

ವಿಶ್ವ ಆಂಟಿಮೈಕ್ರೊಬಿಯಲ್ ಜಾಗೃತಿ ಸಪ್ತಾಹ 2022ರ ಅಂಗವಾಗಿ ನವೆಂಬರ್ 20, 2022 ರ ಭಾನುವಾರದಂದು, ಸಮುದಾಯದಲ್ಲಿ ಜಾಗೃತಿ ಮೂಡಿಸಲು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಹೊರರೋಗಿ ವಿಭಾಗದ ಮುಂಭಾಗದಲ್ಲಿ ‘ಸೈಕಲ್ ಜಾಥಾ’ ನಡೆಯಿತು.

ಮಾಹೆ ಮಣಿಪಾಲದ ಉಪಕುಲಪತಿ, ಲೆಫ್ಟಿನೆಂಟ್ ಜನರಲ್ (ಡಾ) ಎಂ. ಡಿ. ವೆಂಕಟೇಶ್ ಅವರು ಈ ಜಾಥಕ್ಕೆ ಚಾಲನೆ ನೀಡಿದರು. ಮಹಾರಾಷ್ಟ್ರ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ನಾಶಿಕ್ ಇಲ್ಲಿನ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ ) ಮಾಧುರಿ ಕಾನಿಟ್ಕರ್, ಕೆ ಎಂ ಸಿ ಡೀನ್ ಡಾ. ಶರತ್ ಕುಮಾರ್ ರಾವ್, ಸಹ ಡೀನ್ ಡಾ. ಚಿರೊಂಜೋಯ್ ಮುಖ್ಯಪಾಧ್ಯಾಯ್, ಡಾ. ಟಿ ಎಂ ಎ ಪೈ ಆಸ್ಪತ್ರೆಯ ವೈದ್ಯಕೀಯ ಅದೀಕ್ಷಕ ಡಾ. ಶಶಿಕಿರಣ್, ಡಾ. ವಂದನಾ, ಡಾ. ಮುರಳಿಧರ್ ವರ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಾಥಾದಲ್ಲಿ 100ಕ್ಕೂ ಹೆಚ್ಚು ಜನರು ಸೈಕಲ್ ನೊಂದಿಗೆ ಭಾಗವಹಿಸಿದ್ದರು. ಕಸ್ತೂರ್ಬಾ ಆಸ್ಪತ್ರೆಯಿಂದ ಆರಂಭಗೊಂಡು ಡಾ. ಟಿ ಎಂ ಎ ಪೈ ಆಸ್ಪತ್ರೆ ಮೂಲಕ ಐ ಎಂ ಎ ಭವನ ತಲುಪಿ ಮುಕ್ತಾಯಗೊಂಡಿತು.

Related Posts

Leave a Reply

Your email address will not be published.