ಕದ್ರಿ ವಾರ್ಡ್ನ ಜನತೆಗೆ ಆಹಾರದ ಸಾಮಾಗ್ರಿ ವಿತರಣೆ
ಕದ್ರಿ ವಾರ್ಡಿನ ಕಾರ್ಪೋರೇಟರ್ ಆದ ಕದ್ರಿ ಮನೋಹರ್ ಶೆಟ್ಟಿ ಇವರ ವಿನಂತಿಯ ಮೇರೆಗೆ ಕದ್ರಿ ದಕ್ಷಿಣ 33ನೇ ವಾರ್ಡಿನಲ್ಲಿ ಕೊರೊನಾ ಸಮಯದಲ್ಲಿ ಸಂಕಷ್ಟದಲ್ಲಿ ಇರುವ ಜನರಿಗೆ ಸಹಾಯವಾಗಲೆಂದು ಆಹಾರದ ಕಿಟ್ಗಳನ್ನು ಒದಗಿಸಿದರು. ಉದ್ಯಮಿ ಗಣೇಶ್ ಶಿರ್ವ ದುಬಾಯಿ ಇವರ ಸಹಕಾರದೊಂದಿಗೆ ಜೊತೆಯಾಗಿ ಕದ್ರಿ ವಾರ್ಡಿನ ತರಕಾರಿ ವ್ಯಾಪಾರಸ್ಥರಾದ ಸುದೀರ್ ಕದ್ರಿ ಮಾರ್ಕೆಟ್ ಹಾಗೂ ಸುನಿಲ್ ಕೊಟ್ಟಾರಿ ಇವರು ತರಕಾರಿಯ ಕಿಟ್ಗಳನ್ನು ಒದಗಿಸಿದರು.
ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರಾದ ಫೆಡ್ರಿಕ್ ಪೌಲ್, ತಾರನಾಥ ಶೆಟ್ಟಿ, ಯಶವಂತ್ ನಾಯ್ಕ್ ,ವಸಂತ್ . ಕದ್ರಿ ಕ್ರಿಕೆಟರ್ಸ್ (ರಿ )ಇದರ ಸದಸ್ಯರುಗಳಾದ ಜಗದೀಶ್ ಕದ್ರಿ, ಪ್ರತೀಕ್ ಶೆಟ್ಟಿ ,ರವೀಶ್ ರೈ, ಆದಿತ್ಯ, ಬಾಳಿಗ,ಹೇಮಾನಂದ್,ನಾಗರಾಜ್,ಮೋಹಿತ್ ತಲಪಾಡಿ , ಚರಿತ್ ಪೂಜಾರಿ , ಶೃಜನ್ ಕದ್ರಿ,ಪ್ರಸಾದ್ ಕದ್ರಿ. ಸಹನ ಕದ್ರಿ ಉಪಸ್ಥಿತರಿದ್ದರು.