ಔಷಧೀಯ ಸಸ್ಯಗಳನ್ನು ಬೆಳೆಸುವುದು ಇಂದಿನ ಅಗತ್ಯ: ಮಾಜಿ ಶಾಸಕ ಜೆ.ಆರ್ ಲೋಬೋ
ಮಂಗಳೂರು: ನಗರ ಪ್ರದೇಶದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವುದು ಇಂದಿನ ಅಗತ್ಯ ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಹೇಳಿದರು.ಬ್ರಹ್ಮಶ್ರೀ ನಾರಾಯಣ ಗುರುವರ್ಯರ 167ನೇ ಜನ್ಮದಿನ ಪ್ರಯುಕ್ತ ಕುದ್ರೋಳಿ ಗುರು ಬೆಳದಿಂಗಳು ಸೇವಾ ಸಂಸ್ಥೆಯಿಂದ ಔಷಧೀಯ ಸಸ್ಯಗಳ ನೆಡುವ ಸರಣಿ ಕಾರ್ಯಕ್ರಮದ ಅಂಗವಾಗಿ ಭಾನುವಾರ ಜೆಪ್ಪು ಸೇಂಟ್ ಜೋಸೆಫ್ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೇಂಟ್ ಜೋಸೆಫ್ ಸೆಮಿನರ್ ರೆಕ್ಟರ್ ರೊನಾಲ್ಡ್ ಸೆರಾವೋ, ಆಡಳಿತ ಅಧಿಕಾರಿ ರೆ.ಫಾ.ಲಸ್ರಾದೊ, ಪ್ರೊಫೆಸರ್ ರೆ.ಫಾ.ನವೀನ್ ಪಿಂಟೋ, ಧರ್ಮಗುರು ಮನೋಜ್ ಮ್ಯಾಥೀವ್, ಮಾಜಿ ಶಾಸಕ ಜೆ.ಆರ್ ಲೋಬೋ, ಮರಿಯನ್ ಬಿಲ್ಡರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ನವೀನ್ ಕರ್ಡೋಜಾ, ಮಾಂಡ್ ಸೊಬಾನ್ ಅಧ್ಯಕ್ಷ ಲೂಯಿ ಪಿಂಟೋ, ಗುರು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಜಯಾನಂದ, ಭಾಸ್ಕರ್, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನೀಲ್ ಲೋಬೋ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅನಿಲ್ ಕುಮಾರ್, ಎಂಎಸ್.ಕೋಟ್ಯಾನ್, ಫ್ಲವರ್ ಡೆಕೋರೇಟರ್ ರೋಹಿದಾಸ್, ಡಾ.ಎಂ.ಎಸ್ ಕೋಟ್ಯಾನ್, ಪರಿಸರ ಪ್ರೇಮಿಗಳಾದ ಜೀತ್ ಮಿಲನ್ ರೋಚ್, ಮಾಧವ ಉಳ್ಳಾಲ್, ಕ್ರೀಡಾಪಟು ರವಿ ಉರ್ವ, ಸಾಮಾಜಿಕ ಕಾರ್ಯಕರ್ತ ಸುನೀಲ್ ಕುಮಾರ್ ಬಜಾಲ್ ಮೊದಲಾದವರಿದ್ದರು.