ದೇರೆಬೈಲ್‌ನ 23ನೇ ಪೂರ್ವ ವಾರ್ಡಿನ ಸಮಸ್ಯೆಗಳ ಬಗ್ಗೆ ಮೇಯರ್ ಪ್ರೇಮಾನಂದ ಶೆಟ್ಟಿ ಪರಿಶೀಲನೆ

ಮಂಗಳೂರು ಮಹಾನಗರ ಪಾಲಿಕೆಯ ದೇರೆಬೈಲ್‌ನ 23ನೇ ಪೂರ್ವ ವಾರ್ಡಿನ ಸಮಸ್ಯೆಗಳ ಬಗ್ಗೆ ಮೇಯರ್ ಪ್ರೇಮಾನಂದ ಶೆಟ್ಟಿ ಸೇರಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು.

ಇನ್ನು ಲ್ಯಾಂಡ್ ಲಿಂಕ್‌ನ ಲೇಹೌಟ್‌ನಲ್ಲಿರುವ ಸಣ್ಣ ಉದ್ಯವನ ಹಾಗೂ ಡ್ರೈನೇಜ್ ಸಮಸ್ಯೆ ಮೇಯರ್ ಅವರು ಅಧಿಕಾರಿಗಳ ಜೊತೆಯಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಮೇಯರ್ , ಪಾಲಿಕೆಯ ವಿಶೇಷ ಅನುದಾನ ಮುಖಾಂತರ ಪಾರ್ಕ್‌ನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಲಾಂಡ್ ಲಿಂಕ್ಸ್ ನಲ್ಲಿರುವ ಬಡಾವಣೆಗಳ ಒಳಗಿರುವ ಪಾರ್ಕ್ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಅವರು ಹೇಳಿದರು.

ಜೊತೆಗೆ ಡ್ರೈನೇಜ್ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಅವರು ಹೇಳಿದರು. ಈ ವೇಳೆ ಸ್ಥಳೀಯ ಪಾಲಿಕೆ ಸದಸ್ಯೆ ರಜನಿ ಕೋಟ್ಯಾನ್, ಸೇರಿದಂತೆ ಪಾಲಿಕೆ ಅಧಿಕಾರಿಗಳು ಉಪಸ್ಥಿತಿರಿದ್ದರು.

 

Related Posts

Leave a Reply

Your email address will not be published.