ಪಡುಬಿದ್ರಿ ಸೇತುವೆ ಬಳಿ ಲಾರಿಯಡಿಗೆ ನುಸುಳಿದ ಬೈಕ್ ಸವಾರನಿಗೆ ಗಂಭೀರ ಗಾಯ
ಲಾರಿಯಡಿಗೆ ಬಿದ್ದ ಬೈಕ್ಕಿಂದ ಎಸೆಯಲ್ಪಟ್ಟ ಸವಾರ ಅದೃಷ್ಟವಶಾತ್ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆ ಸೇರಿದ್ದಾರೆ.
ಗಂಭೀರ ಗಾಯಗೊಂಡ ವ್ಯಕ್ತಿ ಬೆಳ್ಮಣ್ ನಿವಾಸಿ ವಿಲ್ಸನ್(44) ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ಲಾತೂರಿಗೆ ಹೋಗುತ್ತಿದ್ದ ಲಾರಿಯಡಿಗೆ ಪಡುಬಿದ್ರಿ ಕಡೆಯಿಂದ ಅದಮಾರು ಪತ್ನಿ ಮನೆಕಡೆಗೆ ಹೋಗುತ್ತಿದ್ದ ಬೈಕ್ ಸವಾರನಿಗೆ ಪಡುಬಿದ್ರಿ ಸೇತುವೆ ಬಳಿ ಲಾರಿ ಡಿಕ್ಕಿಯಾಗಿದ್ದು, ಡಿಕ್ಕಿಯಾದ ರಭಸಕ್ಕೆ ಸವಾರ ಎಸೆಯಲ್ಪಟ್ಟಿದ್ದಾನೆ. ಲಾರಿಯಡಿಗೆ ಸಿಲುಕಿದ ಬೈಕಿಗೆ ಬೆಂಕಿ ಹತ್ತಿಕೊಂಡಿದೆ. ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಬೈಕಿಗೆ ಹತ್ತಿಕೊಂಡ ಬೆಂಕಿಯನ್ನು ಸ್ಥಳೀಯರು ನಂದಿಸಿ ಸಂಭವಿಸ ಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ. ಗಾಯಾಳು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.