ಪುತ್ತೂರಿನ ನಿವೃತ್ತ ಎ.ಎಸ್.ಐ ರಾಮಕೃಷ್ಣ ನಿಧನ

ಪುತ್ತೂರು: ಬಲ್ನಾಡು ಕರ್ಕುಂಜ ನಿವಾಸಿ ನಿವೃತ್ತ ಎ.ಎಸ್.ಐ ರಾಮಕೃಷ್ಣ(70ವ) ಅವರು ನ.15ರ ತಡ ರಾತ್ರಿ ನಿಧನರಾದರು. ಪುತ್ತೂರು ನಗರ ಪೊಲೀಸ್ ಠಾಣೆ ಸೇರಿದಂತೆ ಹಲವಾರು ಕಡೆ ಕರ್ತವ್ಯ ನಿರ್ವಹಿಸಿದ್ದ ರಾಮಕೃಷ್ಣ ಅವರು ಮನೆಯಲ್ಲಿದ್ದ ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದರು. ನ.25 ರಂದು ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ತಡ ರಾತ್ರಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಆಗಲೇ ಅವರು ಮೃತಪಟ್ಟಿದ್ದರು. ಮೃತರು ಪತ್ನಿ ಭಾರತಿದೇವಿ, ಪುತ್ರ ಹರ್ಷಿತ್ ಅವರನ್ನು ಅಗಲಿದ್ದಾರೆ.

Related Posts

Leave a Reply

Your email address will not be published.