ರಾಜ್ಯ ರೈತಸಂಘ ಉಬರಡ್ಕ ಮಿತ್ತೂರು ಗ್ರಾಮ ಘಟಕದ ಪುನರ್ರಚನೆ

ಕರ್ನಾಟಕ ರಾಜ್ಯ ರೈತಸಂಘ ಉಬರಡ್ಕ ಮಿತ್ತೂರು ಗ್ರಾಮ ಘಟಕದ ಪುನರ್ರಚನೆ ಹಾಗೂ ಸಭಾ ಕಾರ್ಯಕ್ರಮ ಉಬರಡ್ಕ ಮಿತ್ತೂರು ಪಂಚಾಯತ್ ಸಭಾಭವನದಲ್ಲಿ ರೋಹನ್ ಪೀಟರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತಾನಾಡಿದ ರಾಜ್ಯಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಕೇಂದ್ರ ಸರಕಾರ ಸುಗ್ರಿವಾಜ್ಞೆಯ ಮೂಲಕ ತಂದಿರುವ ಜನವೀರೊಧಿ ಮೂರು ಮಸೂದೆಗಳಿಂದ ಭಾರತದ ಆಹಾರ ಸಾರ್ವಭೌಮತ್ವದ ದುಷ್ಪರಿಣಾಮ ಬೀರುತ್ತದೆ. ದೇಶಿಯ ಕೃಷಿ ಸಂಸೃತಿ ಸಂಪೂರ್ಣ ನಾಶವಾಗುತ್ತದೆ. ಸರಕಾರವೂ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ನೀಡುವುದರ ಜೊತೆಗೆ ಬೆಂಬಲಬೆಲೆಯನ್ನು ಕಾನೂನಾತ್ಮಕ ಗೊಳಿಸಲು ಸರಕಾವನ್ನು ಆಗ್ರಹಿಸಿದರು . ಈ ಸಾಲಿನಲ್ಲಿ ಅನಿರ್ದಿಷ್ಟವಾಗಿ ಮಳೆ ಸುರಿಯುತ್ತಿದ್ದು ಅಡಿಕೆ ಬೆಳೆಯು ಕೊಳೆರೋಗದಿಂದ ಉತ್ಪಾದನೆಯಲ್ಲಿ ತೀವ್ರ ಕುಂಠಿತವಾಗಿದೆ.ಅಲ್ಲದೇ ಅಡಿಕೆಯನ್ನು ಒಣಗಿಸಲು ಮಳೆಯು ಅಡ್ಡಿಯಾಗಿದ್ದು.ಸರಕಾರ ತಕ್ಷಣ ಅಡಿಕೆ ಬೆಳೆಗಾರರ ಸಂಕಷ್ಟ ಆರ್ಥಿಕ ಪರಿಹಾರವನ್ನು ಘೋಷಿಸಲು ಒತ್ತಾಯಿಸಿದರು. ಹವಾಮಾನ‌ಆಧಾರಿತ ಬೆಳೆವಿಮೆಯ ಪರಿಹಾರವನ್ನು ಪೂರ್ಣಪ್ರಮಾಣದಲ್ಲಿ ತಕ್ಷಣವೇ ನೀಡಲು ಸರಕಾರ ಸೂಚಿಸಬೇಕೆಂದು ಒತ್ತಾಯಿಸಿದರು. ಅಡಿಕೆ ಎಲೆಹಳದಿರೋಗಕ್ಕೆ ರಾಜ್ಯ ಸರಕಾರವೂ ಈಗಾಗಲೇ 25 ಕೋಟಿ ರೂಪಾಯಿಗಳನ್ನು ಘೋಷಿಸಿದ್ದು ಅದನ್ನು ಸಂಶೋದನೆಗೆ ಬಳಸದೆ ನೇರವಾಗಿ ಸಂತ್ರಸ್ತ ರೈತಕುಟುಂಬಕ್ಕೆ ನೀಡಬೇಕು ಹಾಗೂ ಪ್ರಸ್ತುತ ಜಿಲ್ಲಾಡಳಿತ ಮಾಡಿದ ಸರ್ವೆ ಅಸಮರ್ಪಕವಾಗಿದ್ದು ರೈತಸಂಘವೇ ಸಂತ್ರಸ್ತರಿಂದ ನೇರ ಸಮೀಕ್ಷೆ ನಡೆಸಿ ಕರ್ನಾಟಕ ಕೃಷಿಬೆಲೆ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಕೃಷಿ ತಜ್ಞರಾದ ಡಾ! ಪ್ರಕಾಶ್ ಕಮ್ಮರಡಿಯವರ ಮೂಲಕ ವರದಿಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದು ಸರಕಾರವೂ ಈ ವರದಿಯ ಆಧಾರದಲ್ಲಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ಮಾತನಾಡಿ ದೇಶದ ಲಾಭದಾಯಕ ಸಂಸ್ಥೆಗಳನ್ನು ಖಾಸಗೀಕರಣದ ಹೆಸರಿನಲ್ಲಿ ಸರಕಾರ ಮಾರುತ್ತಿದೆ. ಈ ಬಗ್ಗೆ ತೀವ್ತ ಕಳವಳ ವ್ಯಕ್ತಪಡಿಸಿದರು ಅಲ್ಲದೇ ರೈತರು ಹಾಗೂ ದುಡಿಯುವ ವರ್ಗ ಒಂದಾಗಿ ದೇಶದ ಸಂಪತ್ತನ್ನು ಇಳಿಸಲು ಹೋರಾಟ ಮಾಡಬೇಕೆಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಬಾಳ್ತಿಲ ಜಾತಿ,ಧರ್ಮ ಮೀರಿ ರಾಜಕೀಯ ಪ್ರಜ್ಞೆ ಬೆಳಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು .*ಸಂಘಟನಾ ಕಾರ್ಯದರ್ಶಿ ರೋನಿ ಮೆಂಡೊನ್ಸ,ಜಿಲ್ಲಾ ಉಪಾಧ್ಯಕ್ಷರಾದ ದಿವಾಕರ ಪೈ ಮಜಿಗುಂಡಿ.ತಾಲೂಕು ಅಧ್ಯಕ್ಷರಾದ ಲೋಲಾಜಾಕ್ಷ ಗೌಡ ಭೂತಕಲ್ಲು,ತಾಲೂಕು ಗೌರವಾಧ್ಯಕ್ಷರಾದ ನೂಜಾಲೂ ಪದ್ಮನಾಭ ಗೌಡ,ತಾಲೂಕು ಸಂಚಾಲಕರಾದ ಸೆಬಾಸ್ಟಿಯನ್,ತಾಲೂಕು ಯುವ ಮುಖಂಡ ಮಂಜುನಾಥ ಮಡ್ತಿಲ ಹಾಗೂ ಉಬರಡ್ಕ ಮಿತ್ತೂರು ಗ್ರಾಮಸ್ಥರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ನಿರ್ವಹಿಸಿದರು ಉಬರಡ್ಕ‌ಮಿತ್ತೂರು ಗ್ರಾಮ ಘಟಕದ ನೂತನ ಗೌರವಾಧ್ಯಕ್ಷರಾಗಿ ಮಾಧವ ಗೌಡ ಸುಳ್ಯಕೋಡಿ,ಅಧ್ಯಕ್ಷರಾಗಿ ರೋಹನ್ ಪೀಟರ್ ಪುನರ್ ಅಯ್ಕೆ ಯಾದರು,ಪ್ರಧಾನ ಕಾರ್ಯದರ್ಶಿ ಯಾಗಿ ಗೌತಮ್ ಮಡಿಯಾರು ಉಪಾಧ್ಯಕ್ಷರುಗಳಾಗಿ ಸುಮಿತ್ರ ಗೋಪಾಲಕೃಷ್ಣ ಬೆಳ್ಳಿಪ್ಪಾಡಿ ಹಾಗೂ ಭವಾನಿ ಮೂರ್ಜೆ ಆಯ್ಕೆಯಾದರು.

Related Posts

Leave a Reply

Your email address will not be published.