ಎ.9ರಂದು ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ

ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಸಹಯೋಗದಲ್ಲಿ ಪೇರೂರು ರುಕ್ಕು ಪೂಜಾರ್ದಿ, ಬಾಗಿ ಪೂಜಾರ್ದಿ, ಲೆಚ್ಚು ಪೂಜಾರ್ದಿ ನೆನಪಿನಲ್ಲಿ ತುಳು ಧರ್ಮ ಸಂಶೋಧನಾ ಕೇಂದ್ರ ಪೇರೂರು ವತಿಯಿಂದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ-2022 ಪ್ರದಾನ ಕಾರ್ಯಕ್ರಮವು ಎಪ್ರಿಲ್ 9ರಂದು ಉರ್ವಸ್ಟೋರ್ನ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಸಭಾಂಗಣದಲ್ಲಿ ನಡೆಯಲಿದೆ.
ಪಾಣೆಮಂಗಳೂರಿನ ಶಾರದಾ ಹೈಸ್ಕೂಲ್ನ ಸುಧಾ ನಾಗೇಶ್ ಮತ್ತು ಮಂಚಿ ಕೊಲ್ನಾಡಿನ ಸರ್ಕಾರಿ ಹೈಸ್ಕೂಲ್ನ ವಿಜಯಲಕ್ಷ್ಮೀ ಕಟೀಲು ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಚಂದ್ರಕಲಾ ನಂದಾವರ, ಜ್ಯೋತಿ ಚೇಳ್ಯಾರು, ಕಲೇವಾಸಂ, ಪೇರೂರು ಜಾರು ಎಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.