ಉಚ್ಚಿಲ: ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲದ ವತಿಯಿಂದ ಆಷಾಢ ಮಾಸದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಶ್ರೀ ಮಹಾಲಕ್ಷ್ಮೀ ಅಮ್ಮನವರಿಗೆ ಅತ್ಯಂತ ಪ್ರಿಯವಾದ ವಿಶೇಷ ತುಪ್ಪದ ಅಪ್ಪ ಸೇವೆ ಆಗಸ್ಟ್ 10ರಂದು ಸೋಮವಾರ ಅಪರಾಹ್ನ ಕ್ಷೇತ್ರದಲ್ಲಿ ಅಪಾರ ಸಂಖ್ಯೆಯ ಭಗವದ್ಭಕ್ತರ ಉಪಸ್ಥಿತಿಯಲ್ಲಿ ಭಕ್ತಿ-ಶ್ರದ್ಧೆಯಿಂದ ಸಂಪನ್ನಗೊಂಡಿತು. ಶ್ರೀ ಮಹಾಲಕ್ಷ್ಮೀ ಅಮ್ಮನವರಿಗೆ ವಿಶೇಷವಾಗಿ ಸಮರ್ಪಿಸಲಾದ ತುಪ್ಪದ ಅಪ್ಪ ಸೇವೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. ಕ್ಷೇತ್ರದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ್ದು, ಭಕ್ತರಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಭಾವ ಮೂಡಿಸಿತು.

ಈ ಸಂದರ್ಭದಲ್ಲಿ ನಾಡೋಜ ಡಾ. ಜಿ. ಶಂಕರ್, ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಗಿರಿಧರ್ ಸುವರ್ಣ ಮೂಳೂರು, ಶರಣ್ ಕುಮಾರ್ ಮಟ್ಟು, ರತ್ನಾಕರ್ ಸಾಲ್ಯಾನ್ ಮಲ್ಪೆ, ಸುಜಿತ್ ಸಾಲ್ಯಾನ್ ಮೂಲ್ಕಿ, ವಾಸುದೇವ ಸಾಲ್ಯಾನ್ ಕಟಪಾಡಿ, ವಿನಯ್ ಕರ್ಕೇರ ಮಲ್ಪೆ, ಗುಂಡು ಬಿ. ಅಮೀನ್ ಕಿದಿಯೂರು, ಹರಿಯಪ್ಪ ಆರ್. ಕೋಟ್ಯಾನ್ ಮಲ್ಪೆ, ಸುಧಾಕರ್ ಕುಂದರ್ ಬಂಕೆರ್ಕಟ್ಟ, ರವೀಶ್ ಎಸ್. ಕೊರವಾಡಿ, ಕರುಣಾಕರ್ ಸಾಲ್ಯಾನ್ ಮಲ್ಪೆ, ದಿನೇಶ್ ಎರ್ಮಾಳ್, ವಿಠಲ್ ಕರ್ಕೇರ ಬೆಳ್ಳಂಪಳ್ಳಿ, ಸತೀಶ್ ಸಾಲ್ಯಾನ್ ಎರ್ಮಾಳ್, ಸುಂದರ್ ಸಾಲ್ಯಾನ್ ಮಲ್ಪೆ, ಶಿವರಾಮ ಕೋಟ, ಶಿವಪ್ಪ ಟಿ. ಕಾಂಚನ್ ಮಲ್ಪೆ, ರಾಜೇಂದ್ರ ಸುವರ್ಣ ಹಿರಿಯಡ್ಕ, ಸುಧಾಕರ ಸುವರ್ಣ ಎರ್ಮಾಳ್, ಮನೋಜ್ ಕಾಂಚನ್ ಎರ್ಮಾಳ್, ಸುಗುಣ ಎಸ್. ಕರ್ಕೇರ, ಪೂರ್ಣಿಮಾ ಚಂದ್ರಶೇಖರ, ಭರತ್ ಎರ್ಮಾಳ್ ಹಾಗೂ ಮೋಹನ್ ಬಂಗೇರ ಕಾಪು ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.


