ಸುಳ್ಯ:ತಾಯಿಯ ಹೆಸರಿನಲ್ಲೊಂದು ಗಿಡ ನೆಡುವ ಕಾರ್ಯಕ್ರಮ
ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಸುಳ್ಯ ಮಂಡಲದ ವತಿಯಿಂದ ತಾಯಿಯ ಹೆಸರಿನಲ್ಲೊಂದು ಗಿಡ ನೆಡುವ ಕಾರ್ಯಕ್ರಮ ವು ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಶಾಂತಿನಗರ ರಾಧಾಕೃಷ್ಣ ನಾಯಕ್ ಅವರ ಮನೆಯಲ್ಲಿ ನಡೆಯಿತು.
ಜಿಲ್ಲಾಧ್ಯಕ್ಷರಾದ ಮಹೇಶ್ ಜೋಗಿ, ಮಂಡಲದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಜಿಲ್ಲಾ ಬಿಜೆಪಿ ಒಬಿಸಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ,ಮಂಡಲದ ಒಬಿಸಿ ಅಧ್ಯಕ್ಷರು ಗಿರೀಶ್ ಐನೇಕಿದು, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಪನೆ,ನಗರ ಮಹಾಶಕ್ತಿಕೇಂದ್ರ ಕಾರ್ಯದರ್ಶಿ ನಾರಾಯಣ, ಪ್ರಧಾನ ಕಾರ್ಯದರ್ಶಿ ಗಳಾದ ಅಶೋಕ್ ಅಡ್ಕರ್, ಸದಾನಂದ ಆಚಾರ್ಯ, ಸೋಮನಾಥ ಪೂಜಾರಿ, ಉಪಾಧ್ಯಕ್ಷರಾದ ಚಂದ್ರಶೇಖರ, ರಾಧಾಕೃಷ್ಣ ನಾಯಕ್ ಶಾಂತಿನಗರ, ಕಾರ್ಯದರ್ಶಿ ನಿರ್ಮಲ, ಸರಿತಾ ,ಕೋಶಾಧಿಕಾರಿ ಪೂರ್ಣಿಮಾ,ಕಾರ್ಯಕಾರಿಣಿ ಸದಸ್ಯರುಗಳಾದ ಪುರಂದರ, ಅಶೋಕ್ ಕುಮಾರ್, ಚಂದ್ರವತಿ, , ಅನಿತಾ ಪ್ರಕಾಶ್, ಉಪಸ್ಥಿತರಿದ್ದರು.

















