ಏಳು ಪಟ್ಟಣ ಮೊಗವೀರ ಸಭಾ : ಕದ್ರಿಯಲ್ಲಿ ಸಿಯಾಳ ಅಭಿಷೇಕ

ಮಂಗಳೂರು : ಇಲ್ಲಿನ ಏಳು ಪಟ್ಟಣ ಮೊಗವೀರ ಸಂಯುಕ್ತ ಸಭಾದ ವತಿಯಿಂದ ಶ್ರಾವಣ ಮಾಸದ ಪ್ರಥಮ ಸೋಮವಾರ ಪದ್ಧತಿಯಂತೆ ಈ ಬಾರಿ ಕೂಡಾ ಕದ್ರಿ ಮಠದಲ್ಲಿ ಹಾಗೂ ಕದ್ರಿ ಕ್ಷೇತ್ರದಲ್ಲಿ ಸಿಯಾಳ ಅಭಿಷೇಕ ನೆರವೇರಿತು.
ಕದ್ರಿ ಮಠದ ಆವರಣದಲ್ಲಿ ಇರುವ ಪೂರ್ವ ಕಾಲದ ಮಠಾಧೀಶರ ಬೃಂದಾವನಗಳಲ್ಲಿ, ಶ್ರೀ ಕಾಳ ಬೈರವೇಶ್ವರ ಸಾನಿಧ್ಯದಲ್ಲಿ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಈ ಅಭಿಷೇಕ ಆರಾಧನೆ ನಡೆಯಿತು.
ಸಮುದ್ರ ಪೂಜೆ ನಡೆದ ಬಳಿಕ ಕದ್ರಿಯಲ್ಲಿ ಈ ಸಿಯಾಳ ಅಭಿಷೇಕವನ್ನು ಏಳು ಪಟ್ಟಣ ಮೊಗವೀರ ಸಂಯುಕ್ತ ಸಭಾದಿಂದ ಅನೇಕ ವರ್ಷಗಳಿಂದ ನಡೆಸಿ ಕೊಂಡು ಬರಲಾಗುತ್ತಿದೆ. ಸಂಯುಕ್ತ ಸಭಾದ ಪದಾಧಿಕಾರಿಗಳು, ಗುರಿಕಾರರು ಮತ್ತು ವಿವಿಧ ಗ್ರಾಮಗಳ ಪ್ರತಿನಿಧಿಗಳು ಈ ಸಂದರ್ಭ ಉಪಸ್ಥಿತರಿದ್ದರು.