ಆರು ವರುಷದ ಹಿಂದೆ ಅಯೋಧ್ಯೆ ರಾಮ ಮಂದಿರದ ಹುಂಡಿ ನುಂಗಣ್ಣರ ಬಗೆಗೆ ಲೆಕ್ಕಪತ್ರ ವರದಿ ಇತ್ತು; ಆದರೆ ಈಗಲೂ ಅದು ನಿಂತಿಲ್ಲ. ಕಾಲು ನೂರಟ್ಟಿ ಹಿಂದೆಯೇ ಅಯೋಧ್ಯೆ ರಾಮ ಮಂದಿರದ ಹೆಸರಿನಲ್ಲಿ ಹಣ ಲೂಟಿ, ಕಾನೂನು ಲೂಟಿ, ಜನರ ಮಿದುಳು ಲೂಟಿ, ನೈತಿಕತೆ ಲೂಟಿ ನಡೆದಿದೆ.
ಬಾಬರಿ ಮಸೀದಿ ಕೆಡವುವಾಗ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿ ಇದ್ದ ಬಿಜೆಪಿಯು ಅದಕ್ಕೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಮುಚ್ಚಳಿಕೆ ಬರೆದು ಕೊಟ್ಟಿತ್ತು.

ಕಾನೂನು ಲೂಟಿ ಆಯಿತು ಅಷ್ಟೆ. ಇಡೀ ರಾಮ ಮಂದಿರ ಕಲ್ಲಿನದು ಎಂದು ಚಿತ್ರಸಹಿತ ಕರಪತ್ರ ತೋರಿಸಿ ಇಟ್ಟಿಗೆ ಒಟ್ಟುಮಾಡಿದರು. ಜನರ ಮಿದುಳು ಲೂಟಿ ಆಯಿತು. 50 ಕೋಟಿ ಇಟ್ಟಿಗೆ ಒಟ್ಟು ಮಾಡಿ ಮಾರಿ ನುಂಗಿ ನೀರು ಕುಡಿದರು. ದೇಶಪ್ರೇಮಿಗಳಿಂದ ನೈತಿಕತೆಯೇ ಲೂಟಿಯಾಯಿತು.


