ಉಡುಪಿ:ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಪಡುಬಿದ್ರಿ ಘಟಕದ 2026–27ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು, ಶ್ರೀ ನಿಖಿಲ್ ಪೂಜಾರಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪ್ರಥಮ ಉಪಾಧ್ಯಕ್ಷರಾಗಿ ಶ್ರೀಮತಿ ಸುಜಾತ ಪ್ರಸಾದ್, ದ್ವಿತೀಯ ಉಪಾಧ್ಯಕ್ಷರಾಗಿ ಶ್ರೀ ಭಾಸ್ಕರ್ ಎನ್. ಅಂಚನ್, ಕಾರ್ಯದರ್ಶಿಯಾಗಿ ಶ್ರೀಮತಿ ರಾಜೇಶ್ವರಿ ಅವಿನಾಶ್, ಜೊತೆ ಕಾರ್ಯದರ್ಶಿಯಾಗಿ ಶ್ರೀ ಮನೀಷ್ ಎ. ಪೂಜಾರಿ ಹಾಗೂ ಕೋಶಾಧಿಕಾರಿಯಾಗಿ ಶ್ರೀಮತಿ ಪೂರ್ಣಿಮಾ ವಿಧಿತ್ ಕಾರ್ಯನಿರ್ವಹಿಸಲಿದ್ದಾರೆ.
ಆಂತರಿಕ ಲೆಕ್ಕ ಪರಿಶೋಧಕರಾಗಿ ಶ್ರೀಮತಿ ನಿಶ್ಮಿತಾ ಪಿ.ಎಚ್, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಶ್ರೀಮತಿ ಪ್ರತಿಮಾ ಲೋಕೇಶ್, ಕ್ರೀಡಾ ನಿರ್ದೇಶಕರಾಗಿ ಕು. ಸ್ಫೂರ್ತಿ, ಆರೋಗ್ಯ ನಿರ್ದೇಶಕರಾಗಿ ಕು. ದೀಕ್ಷಾ, ಸಮಾಜ ಸೇವಾ ನಿರ್ದೇಶಕರಾಗಿ ಶ್ರೀ ಜಯ ಎನ್. ಪೂಜಾರಿ ನೇಮಕಗೊಂಡಿದ್ದಾರೆ.

ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ ಶ್ರೀ ಹರೀಶ್ ಕೋಟ್ಯಾನ್, ಉಳ್ಳೂರು, ಸಾಂಸ್ಕೃತಿಕ ನಿರ್ದೇಶಕರಾಗಿ ಕು. ಶ್ರೇಯಾ ಎಸ್. ಬಂಗೇರ, ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ಶ್ರೀ ಸಂತೋಷ್ ಕರ್ನಿರೆ, ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರಾಗಿ ಶ್ರೀಮತಿ ಚೈತ್ರಾ ಮನೋಹರ್ ಜವಾಬ್ದಾರಿ ವಹಿಸಲಿದ್ದಾರೆ.
ವಿದ್ಯಾರ್ಥಿಗಳ ಸಂಘಟನಾ ನಿರ್ದೇಶಕರಾಗಿ ಕು. ಶ್ರಾವ್ಯ ಎಸ್. ಬಂಗೇರ ಹಾಗೂ ಶ್ರೀ ಪ್ರಣಮ್ ಪಿ. ಕೋಟ್ಯಾನ್, ಪ್ರಚಾರ ನಿರ್ದೇಶಕರಾಗಿ ಶ್ರೀ ಅಂಕಿತ್ ಕುಮಾರ್, ಮಹಿಳಾ ಸಂಘಟನಾ ನಿರ್ದೇಶಕರಾಗಿ ಶ್ರೀಮತಿ ಲತಾ ವಸಂತ್ ಹಾಗೂ ಶ್ರೀಮತಿ ಶಾಂತ ವಿ., ವಿದ್ಯಾನಿಧಿ ನಿರ್ದೇಶಕರಾಗಿ ಶ್ರೀಮತಿ ತುಳಸಿ ಕರುಣಾಕರ್ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಹೇಮಂತ್ ನಂದಿಕೂರು ಆಯ್ಕೆಯಾಗಿದ್ದಾರೆ.

