ದನಗಳ ಹೆಸರಿನ ಗೂಂಡಾಗಿರಿ ವಿರುದ್ಧ ಪಡುವಣ ಬಂಗಾಳ, ಹಾಸನ ಜಿಲ್ಲೆ ಮೊದಲಾದ ಕಡೆ ಪ್ರತಿಭಟನೆಗಳು ನಡೆದಿವೆ.
ಮಂಗಳೂರು, ಧಾರವಾಡ ಎಂದು ಸಾಕಷ್ಟು ಕಡೆ ಎಮ್ಮೆ ಕೆರೆಗಳು ಇವೆ, ಇದ್ದವು; ದನದ ಕೆರೆಗಳು ಇಲ್ಲ. ಸಿಂಧೂ ನಾಗರಿಕತೆಯಲ್ಲಿ, ಹಿಂದೂ ಆಲಯಗಳಲ್ಲಿ ಮೊದಲಾದ ಕಡೆ ಎತ್ತು ಮೂರ್ತಿ ಇವೆ; ಅಲ್ಲದೆ ಬಸವಾಲಯಗಳೂ ಇವೆ.
ಚಾರಿತ್ರಿಕವಾಗಿ ಏಶಿಯಾ ಖಂಡವು ಎಮ್ಮೆಗಳ ಹಾಗೂ ಯೂರೋಪು ದನಗಳ ನೆಲೆ ಆಗಿತ್ತು; ಬಹುತೇಕ ಹಾಗೆಯೇ ಇದೆ. ಭಾರತದ ಇಂದಿನ ಹಾಲು ದನಗಳು ಹೇಗೆ ವಿದೇಶೀ ಮೂಲದವೋ ಗೋವು ಎಂಬ ನುಡಿ ಕೂಡ ಯೂರೋಪಿನ ಗೌ, ಕೌಗಳಿಂದ ಬಂದಿದೆ. ಗೋವನ್ನು ರಾಷ್ಟಿçÃಯ ಪ್ರಾಣಿ ಮಾಡುವುದು ಶೈವದ ವಿರುದ್ಧ ನಡೆದಿರುವ ಮತ್ತೊಂದು ವೈಷ್ಣವ ತಂತ್ರವಾಗಿದೆ.

