Home Archive by category ರಾಷ್ಟ್ರೀಯ (Page 8)

ಜಮ್ಮು-ಕಾಶ್ಮೀರ: ವಿಶೇಷ ಸ್ಥಾನಮಾನ ರದ್ದು: ಕೇಂದ್ರದ ಆದೇಶ ಎತ್ತಿಹಿಡಿದ ಸುಪ್ರೀಂ: 2024ರ ಸೆ.30ರೊಳಗೆ ಚುನಾವಣೆ ನಡೆಸಲು ಆದೇಶ

370ನೇ ವಿಧಿಯ ವಿಶೇಷ ಅಧಿಕಾರವನ್ನು ಜಮ್ಮು ಮತ್ತು ಕಾಶ್ಮೀರದಿಂದ ಕಿತ್ತುಕೊಂಡು 4 ವರುಷವಾದ ಬಳಿಕ ಇಂದು ಸುಪ್ರೀಂ ಕೋರ್ಟು ನೀಡುವ ತೀರ್ಪಿನತ್ತ ಎಲ್ಲರ ಕಣ್ಣೋಟವಿತ್ತು. ವಿಭಜನೆಯನ್ನು ಮಾನ್ಯ ಮಾಡಿ ಸುಪ್ರೀ ಕೋರ್ಟು ಒಟ್ಟಾರೆ ತೀರ್ಪು ನೀಡಿದೆ. ಪಂಚ ನ್ಯಾಯಾಧೀಶರ ಏಕಾಭಿಪ್ರಾಯದ ತೀರ್ಪು ಎನ್ನಲಾಗಿದೆಯಾದರೂ ಮೂರು ವಿಭಿನ್ನ ಅಭಿಪ್ರಾಯದ ತೀರ್ಪು ಹೊರಬಂದಿದೆ.

ಒಡಿಶಾ, ಜಾರ್ಖಂಡ್ ಪಶ್ಚಿಮ ಬಂಗಾಳದಲ್ಲಿ ಇಡಿ ದಾಳಿ – 290 ಕೋಟಿ ಕಳ್ಳ ಹಣ ವಶ

ಶನಿವಾರ dec 9 ;- ಇಡಿ- ಜಾರಿ ನಿರ್ದೇಶನಾಲಯದವರು ಒಡಿಶಾ ಮೂಲದ ಡಿಸ್ಟಿಲರಿ ಅವ್ಯವಹಾರಕ್ಕೆ ಸಂಬಂಧಿಸಿದ ಒಡಿಶಾ, ಜಾರ್ಖಂಡ್ ಪಶ್ಚಿಮ ಬಂಗಾಳದ ಮೂರು ಡಿಸ್ಟಿಲರಿಗೆ ದಾಳಿ ಮಾಡಿ 290 ಕೋಟಿ ರೂಪಾಯಿ ಲೆಕ್ಕ ಇಲ್ಲದ ಹಣ ವಶಪಡಿಸಿಕೊಂಡರು.ಈ ದಾಳಿ ವೇಳೆ ಒಂಬತ್ತು ಲಾಕರ್ ಮತ್ತು ಏಳು ಮುಚ್ಚಿದ ಕೋಣೆಗಳನ್ನು ತಪಾಸಣೆ ಮಾಡಲಾಯಿತು. ಕಪಾಟುಗಳಲ್ಲದೆ ಪೀಠೋಪಕರಣಗಳಲ್ಲೂ ಹಣ ಅಡಗಿಸಿಡಲಾಗಿತ್ತು. ಇದೇ ವೇಳೆ ಒಡಿಶಾದ ಮಹಿಳಾ ಮಂತ್ರಿ ಒಬ್ಬರು ಈ ಡಿಸ್ಟಿಲರಿಯ ಜೊತೆ ವೇದಿಕೆ

ತೆಲಂಗಾಣ – ಅಕ್ಬುರುದ್ದೀನ್ ಒವೈಸಿ ಹಂಗಾಮಿ ಸಭಾಪತಿ ; ಪ್ರಮಾಣವಚನ ಬಹಿಷ್ಕರಿಸಿದ ಬಿಜೆಪಿ

ತೆಲಂಗಾಣ ರಾಜ್ಯ ವಿಧಾನ ಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರ ಪ್ರಮಾಣವಚನ ಸ್ವೀಕಾರವನ್ನು ಡಿಸೆಂಬರ್ 9ರ ಶನಿವಾರ ಇಟ್ಟುಕೊಳ್ಳಲಾಗಿದ್ದು, ಅಕ್ಬರುದ್ದಿನ್ ಒವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ. ಇದನ್ನು ವಿರೋಧಿಸಿ ಬಿಜೆಪಿಯ ಶಾಸಕರು ಪ್ರಮಾಣವಚನ ಸಮಾವೇಶವನ್ನೇ ಬಹಿಷ್ಕರಿಸಿದರು. ಘೋಷಾಮಹಲಿನಿಂದ ಆಯ್ಕೆಯಾಗಿರುವ ಬಿಜೆಪಿ ಶಾಸಕ ಟಿ. ರಾಜಾಸಿಂಗ್ ಅವರು ನಾನು ಬದುಕಿರುವವರೆಗೆ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ಆವೇಶದಿಂದ ಘೋಷಣೆ ಮಾಡಿದರು.

ಐಸಿಸ್ ಸಂಚು ಪ್ರಕರಣ, ಎನ್‍ಐಎ ದಾಳಿ

ಎನ್‍ಐಎ- ರಾಷ್ಟ್ರೀಯ ತನಿಖಾ ಏಜೆನ್ಸಿಯವರು ಐಎಸ್‍ಐಎಸ್ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ 44 ಕಡೆ ದಾಳಿ ನಡೆಸಿ, ಹಲವರನ್ನು ಪ್ರಶ್ನಿಸಿ, 13 ಜನರನ್ನು ಡಿಸೆಂಬರ್ 9ರ ಶನಿವಾರ ಬೆಳಿಗ್ಗೆ ಬಂಧಿಸಿದ್ದಾರೆ.ಪೂನಾದ ಎರಡು ಕಡೆ, ಮುಂಬಯಿ ಹೊರ ವಲಯದ ಥಾಣೆಯ 9 ಕಡೆ, ಥಾಣೆ ಹೊರ ವಲಯದ 31 ಕಡೆ, ಬಾಯಂದರ್‍ನ ಒಂದು ಕಡೆ ಮತ್ತು ಕರ್ನಾಟಕದ ಬಡಗಣ ಭಾಗದ ಕೆಲವೆಡೆ ಶನಿವಾರ ಏಕ ಕಾಲಕ್ಕೆ ದಾಳಿ ಮಾಡಿದರು. ಅಲ್ ಕೈದಾ

ದಶಕದಲ್ಲಿ ದಲಿತರ ವಿರುದ್ಧ ದೌರ್ಜನ್ಯ 48%ದಷ್ಟು ಹೆಚ್ಚಳ

ಕಳೆದೊಂದು ದಶಕದಲ್ಲಿ ದಲಿತರ ಮೇಲಿನ ಅಪರಾಧಗಳು ಭಾರತದಲ್ಲಿ 48 ಶೇಕಡಾದಷ್ಟು ಹೆಚ್ಚಾಗಿರುವುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಗ್ರಾಫ್ ಪೋಸ್ಟ್ ಮಾಡುವ ಮೂಲಕ ಬಿಜೆಪಿಯ ಸಬ್ ಕ ಸಾಥ್ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ.ಎನ್‍ಸಿಆರ್‍ಬಿ- ರಾಷ್ಟ್ರೀಯ ಅಪರಾಧ ವರದಿಯ ಆಧಾರದ ಮೇಲೆ ಈ ಗ್ರಾಫ್ ತಯಾರಾಗಿದೆ. ದಲಿತರ ಮೇಲೆ 46.12% ಮತ್ತು ಬುಡಕಟ್ಟು ಜನರ ಮೇಲೆ 48.15% ದೌರ್ಜನ್ಯ ಅಧಿಕವಾಗಿರುವುದು ಅಂಕಿಅಂಶದಲ್ಲಿದೆ.ಚುನಾವಣೆ ಮುಗಿದ

ಮಾಸ್ಟರ್ ಚೆಫ್ ಇಂಡಿಯಾ-2023 ವಿಜೇತರಾಗಿ ಮಂಗಳೂರಿನ ಮೊಹಮ್ಮದ್ ಆಶಿಕ್

ಮಂಗಳೂರಿನ ಮೊಹಮ್ಮದ್ ಆಶಿಕ್ ಮಾಸ್ಟರ್ ಚೆಫ್ ಇಂಡಿಯಾ-2023 ವಿಜೇತರಾಗಿ ಹೊರಹೊಮ್ಮಿದರು. ನಂಬಿ ಜೆಸ್ಸಿಕಾ ಮರಕ್ ಮತ್ತು ರುಖ್ಸಾರ್ ಸಯೀದ್, ಸೂರಜ್ ಅವರೊಂದಿಗೆ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಸ್ಥಾನಗಳನ್ನು ಪಡೆದರು. ಮೊಹಮ್ಮದ್ ಆಶಿಕ್ ಇದಿಗ ಮಂಗಳೂರಿನಲ್ಲಿ ಚಿರಪರಿಚಿತ ಹೆಸರು ಮಂಗಳೂರಿನ ಕುಲುಕಿ ಹಬ್ ಎನ್ನುವ ಸಣ್ಣ ಜ್ಯೂಸ್ ಮಳಿಗೆಯಿಂದ ಸಾಗಿ ಇಂದು ಭಾರತದ ದೊಡ್ಡ ರಿಯಾಲಿಟಿ ಶೋ ಸೋನಿ ಟಿವಿಯ ಮಾಸ್ಟರ್ ಚೆಫ್ ಇಂಡಿಯಾದಲ್ಲಿ ವಿಜೆತರಾದವರು.ಹೋಟೆಲ್

ರಾಜಸ್ತಾನ – ಹಾಸ್ಟೆಲ್ಲಿನ ಹುಡುಗಿಯರನ್ನು ನೋಡಲು ಬಂದ ಚಿರತೆ

ಶನಿವಾರ ಬೆಳ್ಳಂಬೆಳಿಗ್ಗೆ ಉದಯಪುರದ ಬಾಲಕಿಯರ ಹಾಸ್ಟೆಲ್ಲಿಗೆ ಚಿರತೆಯೊಂದು ಮೆಲ್ಲನೆ ಬಂದು ಅಲ್ಲಿದ್ದ ಎಲ್ಲರೂ ಗಡಗಡ ನಡುಗುವಂತೆ ಮಾಡಿತು.ರಾಜಸ್ತಾನದ ಉದಯಪುರದಲ್ಲಿ ಈ ಚಿರತೆ ಇಣುಕುವಿಕೆ ನೋಡುತ್ತಲೇ ಹುಡುಗಿಯರು ಮತ್ತು ವಾರ್ಡನ್ ಎಲ್ಲರೂ ಬಾಗಿಲು ಹಾಕಿಕೊಂಡು ಒಳಗೆ ಕುಳಿತುಕೊಂಡರು. ಭಯದಿಂದ ಹೊರಗೆ ಇಣುಕಿ ನೋಡುತ್ತಲಿದ್ದರು. ಒಂದು ಸುತ್ತು ಆಚೀಚೆ ಹಾಕಿದ ಚಿರತೆಯು ಮೆಲ್ಲನೆ ಬೆಳಗಾಗುವಾಗ ಬಂದ ದಾರಿಯಲ್ಲಿಯೇ ಹಿಂದಕ್ಕೆ ಹೋಯಿತು

ದೆಹಲಿ: ಶೋಭಾ ಕರಂದ್ಲಾಜೆಗೆ ಹೆಚ್ಚುವರಿ ಮಂತ್ರಿಗಿರಿ

ವಿಧಾನ ಸಭೆಗೆ ಆಯ್ಕೆಯಾದ ಕಾರಣ ರಾಜೀನಾಮೆ ನೀಡಿದ ಕೇಂದ್ರ ಮಂತ್ರಿಗಳಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದಸಿಂಗ್ ಪಟೇಲ್, ರೇಣುಕಾ ಸಿಂಗ್ ಅವರು ಹೊಂದಿದ್ದ ಸಚಿವ ಖಾತೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೆಚ್ಚುವರಿಯಾಗಿ ನಾಲ್ವರು ಮಂತ್ರಿಗಳಿಗೆ ಹಂಚಿದ್ದಕ್ಕೆ ಅಂಕಿತ ಹಾಕಿದರು. ಮಂತ್ರಿ ಅರ್ಜುನ್ ಮುಂಡಾರಿಗೆ ಹೆಚ್ಚುವರಿಯಾಗಿ ಕೃಷಿ ಮತ್ತು ರೈತರ ಕಲ್ಯಾಣ, ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಹೆಚ್ಚುವರಿಯಾಗಿ ಆಹಾರ ಸಂಸ್ಕರಣಾ ಉದ್ಯಮಗಳು, ಸಚಿವ ರಾಜೀವ

ಹೊನ್ನೆ ಎಣ್ಣೆಗೂ ಪೆಟ್ರೋಲು ಬದಲಿ ಭಾಗ್ಯ

ನಮ್ಮ ತುಳು ಹಿರಿಯರು ಸೀಮೆ ಎಣ್ಣೆ ಬರುವುದಕ್ಕೆ ಮೊದಲು ದೀಪಕ್ಕೆ ಹೊನ್ನೆ ಎಣ್ಣೆ ಇತ್ಯಾದಿ ಉಪಯೋಗಿಸುತ್ತಿದ್ದರು.ಇದನ್ನು ಗಾಯ, ಸುಟ್ಟ ಗಾಯದ ಸಹಿತ ಚರ್ಮದ ಎಲ್ಲ ತೊಂದರೆಗಳಿಗೆ ಬಳಸುತ್ತಿದ್ದರು. ತುಳುವರು ಇದರ ಎಣ್ಣೆ ಅಡುಗೆಗೆ ಬಳಸದಿದ್ದರೂ ಇದರ ಎಲೆಯಲ್ಲಿ ಅಡ್ಯೆ, ಗೊಡ್ಡು ಬೇಯಿಸುತ್ತಿದ್ದರು. ಇದು ನಿತ್ಯಹಸಿರು ಮರವಾಗಿದ್ದು ಕೊಂಗಣ ಏಶಿಯಾದ ಕರಾವಳಿಯಲ್ಲೆಲ್ಲ ಬೆಳೆಯುತ್ತದೆ. ಇದು ಕ್ಯಾಲೋಪಿಲುಮ್ ಇನೋಪಿಲುಮ್ ಲಿನ್ ಎಂಬ ವೈಜ್ಞಾನಿಕ ವಿಭಾಗದ್ದಾಗಿದೆ.ಈಗ

ಸಾಬೀತು ಮಾಡದಿದ್ದರೆ ಪಾಕ್‍ಗೆ ಹೋಗಲು ಯತ್ನಾಳ್‍ಗೆ ‘ಹಾಶ್ಮಿ’ ಸವಾಲು

ನನಗೆ ಐಸಿಸ್ ಸಂಪರ್ಕ ಇರುವುದನ್ನು ಸಾಬೀತು ಪಡಿಸಿದರೆ ನಾನು ದೇಶವನ್ನೇ ಬಿಡುತ್ತೇನೆ. ನೀವು ಸಾಬೀತು ಪಡಿಸದಿದ್ದರೆ ಪಾಕಿಸ್ತಾನಕ್ಕೆ ಹೋಗಬೇಕು ಎಂದು ಬಿಜೆಪಿ ಶಾಸಕ ಯತ್ನಾಳರಿಗೆ ವಿಜಯಪುರದ ಹಜರತ್ ಹಾಸಿಂ ಪೀರ ದರ್ಗಾದ ಧರ್ಮಾಧಿಕಾರಿ ಸಯ್ಯದ್ ಮೊಹಮದ್ ತನ್ಸೀರ್ ಹಾಶ್ಮಿ ಸವಾಲು ಹಾಕಿದ್ದಾರೆ. ಇದೇ ವೇಳೆ ಹಾಶ್ಮಿಯವರು ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಮತ್ತು ಕೆಲವು ಬಿಜೆಪಿ ನಾಯಕರ ಜೊತೆಗೆ ಇರುವ ಫೆÇೀಟೋ ಸಹ ಬಹಿರಂಗ ಆಗಿದೆ. ಹಾಶ್ಮಿ ಐಸಿಸ್ ಜನ, ಮುಖ್ಯಮಂತ್ರಿ