ಕಾಪು ಹೊಸ ಮಾರಿಗುಡಿ ದೇವಸ್ಥಾನ ನಿರ್ಮಾಣಕ್ಕೆ ಬಿಜೆಪಿಯ ಕೊಡುಗೆ ಏನು ? : ಬೆಳಪು ದೇವಿಪ್ರಸಾದ್ ಶೆಟ್ಟಿ
ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕರಾವಳಿ ಭಾಗದ ಅತೀ ದೊಡ್ಡ ಕಾಪು ಹೊಸ ಮಾರಿಗುಡಿ ದೇವಸ್ಥಾನ ನಿರ್ಮಾಣಕ್ಕೆ ಬಿಜೆಪಿಯ ಕೊಡುಗೆ ಏನು ಎಂಬುದಾಗಿ ದೇವಳ ಅಭಿವೃದ್ಧಿ ಸಮಿತಿಯ ಪ್ರಮುಖರಲ್ಲಿ ಒರ್ವರಾದ ಬೆಳಪು ದೇವಿಪ್ರಸಾದ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಮಾತೆತ್ತಿದರೆ ಹಿಂದುತ್ವದ ಜಪ ಮಾಡುವ ಕಾಪು ಬಿಜೆಪಿಯ ಪ್ರಮುಖರು ಕಳೆದ ಐದು ವರ್ಷಗಳಲ್ಲಿ ಹತ್ತು ರೂಪಾಯಿ ಅನುದಾನ ನೀಡಿದ್ದರೆ ದಾಖಲೆ ಬಿಡುಗಡೆ ಮಾಡಲಿ, ಬಿಜೆಪಿಯ ಹಿಂದುತ್ವವನ್ನು ಅಸಲಿ ಎಂಬುದಾಗಿ ನಂಬಿರುವ ಬಿಜೆಪಿ ಕಾರ್ಯಕರ್ತರಿಗೂ ನಿಜ ವಿಚಾರ ತಿಳಿಯಲಿ ಎಂಬುದಾಗಿ ಸವಾಲು ಹಾಕಿದ್ದಾರೆ.