ಕದ್ರಿ ಮಂಜುನಾಥ ಕ್ಷೇತ್ರಕ್ಕೆ ನೂತನ ವ್ಯವಸ್ಥಾಪನ ಸಮಿತಿ
ಕರಾವಳಿಯ ಪ್ರಸಿದ್ಧ ಕ್ಷೇತ್ರ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ಕ್ಷೇತ್ರಕ್ಕೆ ನೂತನ ವ್ಯವಸ್ಥಾಪನ ಸಮಿತಿಯ ರಚನೆಯಾಗಿದೆ.
ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಎ.ಜೆ.ಶೆಟ್ಟಿ ಆಯ್ಕೆಗೊಂಡರೆ, ಸದಸ್ಯರಾಗಿ ರಾಘವೇಂದ್ರ ಅಡಿಗ, ಕೆ.ದೇವದಾಸ್ ಕುಮಾರ್, ಎಚ್.ಕುಸುಮಾ ದೇವಾಡಿಗ, ಎನ್.ನಿವೇದಿತ ಶೆಟ್ಟಿ, ಕೆ.ರಾಜೇಶ್ , ಎಚ್.ಕೆ.ಪುರುಷೋತ್ತಮ ಜೋಗಿ, ಮನೋಹರ್ ಸುವರ್ಣ, ನಾರಾಯಣ್ ಕೋಟ್ಯಾನ್ ಬೋಳಾರ್ ಆಯ್ಕೆಯಾಗಿದ್ದಾರೆ.
ಮೂರು ವರ್ಷದ ಅವಧಿಗೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಧಾರ್ಮಿಕ ದತ್ತಿ ಇಲಾಖೆ ನೇಮಕಗೊಳಿಸಿದೆ.