ಸೆಪ್ಟೆಂಬರ್ 24, 2021 ರಂದು ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದ ವಿಮಾನಯಾನ ಅಧ್ಯಯನ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್) ದಿನಾಚರಣೆ ನಡೆಯಿತು.
ಎನ್ ಎಸ್ ಎಸ್ ದಿನಾಚರಣೆಯ ಅಂಗವಾಗಿ ಅತಿಥಿ ಭಾಷಣವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ಕಾಲೇಜ್ ನ ಸಹ ಪ್ರಾಧ್ಯಾಪಕರೂ ಹಾಗೂ ಶ್ರೀನಿವಾಸ್ ವಿಶ್ವವಿದ್ಯಾಲಯದ ಉನ್ನತ್ ಭಾರತ್ ಅಭಿಯಾನದ ಸಂಯೋಜಕರೂ ಆಗಿರುವ ಡಾ.ಪ್ರದೀಪ್ ಎಂ.ಡಿ “ಸಮಾಜ ಸೇವೆಯು ಒಂದು ಜೀವನ ವಿಧಾನ” ಎಂಬ ವಿಷಯದ ಕುರಿತು ಬಹಳ ಆಕರ್ಷಕವಾದ ಭಾಷಣವನ್ನು ಮಾಡಿದರು.
ಪ್ರೊ.ಪವಿತ್ರ ಕುಮಾರಿ , ಕಾಲೇಜ್ ಆಫ್ ಏವಿಯೇಷನ್ ಸ್ಟಡೀಸ್ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.ಪ್ರೊ.ಜಯಪ್ರಕಾಶ.ಎನ್ ಎಸ್ ಎಸ್ ಸಂಯೋಜಕರು ಸ್ವಾಗತ ಭಾಷಣ ಮಾಡಿದರು.
ಪ್ರೊ. ಕಾವ್ಯಶ್ರೀ, ಕೋರ್ಸ್ ಸಂಯೋಜಕರು, ಮತ್ತು ಕಾಲೇಜ್ ಆಫ್ ಏವಿಯೇಷನ್ ಸ್ಟಡೀಸ್ ನ ಇತರ ಬೋಧಕ ವರ್ಗದವರು ಹಾಜರಿದ್ದರು.
