HomeFresh Newsಮುಳಿಯ ಗೋಲ್ಡ್ ಆಯಂಡ್ ಡೈಮಂಡ್ಸ್‌ನ ಪುತ್ತೂರು ಶೋರೂಮ್ :ಮುಳಿಯ'ಸ್ ಟೈಮ್ ನ್ ವಾಚ್ ಕೌಂಟರ್ ಆರಂಭ

ಮುಳಿಯ ಗೋಲ್ಡ್ ಆಯಂಡ್ ಡೈಮಂಡ್ಸ್‌ನ ಪುತ್ತೂರು ಶೋರೂಮ್ :ಮುಳಿಯ’ಸ್ ಟೈಮ್ ನ್ ವಾಚ್ ಕೌಂಟರ್ ಆರಂಭ

ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಪುತ್ತೂರಿನ ಕೋರ್ಟ್ ರಸ್ತೆಯ ಶೋರೂಮ್ ನಲ್ಲಿ ಚಿನ್ನಾಭರಣಗಳ ಜತೆಗೆ ಗ್ರಾಹಕರಿಗೆ ಅತಿ ಅಗತ್ಯವಾಗಿರುವ ಉನ್ನತ ಶ್ರೇಣಿಯ ಬ್ರಾಂಡ್‌ಗಳ ವಾಚ್‌ಗಳು ಒಂದೇ ಸೂರಿನಡಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಆರಂಭಿಸಲಾದ ನೂತನ ಮುಳಿಯ’ಸ್ ಟೈಮ್ ರೋನ್ ವಾಚ್ ಕೌಂಟರ್‌ಗುರುವಾರ ಶುಭಾರಂಭಗೊಂಡಿತು.

ಸಮಾರಂಭದ ಮುಖ್ಯ ಅತಿಥಿ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಮಾತನಾಡಿ, ಮುಳಿಯ ಚಿನ್ನಾಭರಣ ಮಳಿಗೆಯು ನಮ್ಮೆಲ್ಲರ ಹೆಮ್ಮೆಯ ಬ್ರಾಂಡ್ ಆಗಿದ್ದು, ಪುತ್ತೂರು ಕಂಬಳದ ಪ್ರಾರಂಭದಿಂದಲೂ ಬಹುಮಾನ ವಾಗಿ 1 ಪವನ್ ಚಿನ್ನ ನೀಡುತ್ತಾ ಕಂಬಳ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ಜತೆಗೆ ಪುತ್ತೂರಿನ ಎಲ್ಲಾ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮುಳಿಯ ಸಂಸ್ಥೆಯ ಕೊಡುಗೆ ಅಪಾರ ವಾಗಿದೆ.

ಹೀಗಾಗಿ ಪುತ್ತೂರಿನ ಜನತೆಗೆ ಸಂಸ್ಥೆಯ ಮೇಲೆ ವಿಶೇಷ ಅಭಿ ಮಾನವಿದ್ದು, ಸಂಸ್ಥೆಯು ಕರ್ನಾಟಕದ ಜತೆಗೆ ಹೊರರಾಜ್ಯಗಳಿಗೂ ವಿಸ್ತರಿಸು ವಂತಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿ ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್‌ ಕಣ್ಣಿನ ತಜ್ಞೆ ಡಾ। ಆಶಾ ಪುತ್ತೂರಾಯ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಸಮಯದ ಮೌಲ್ಯದ ಅರಿವು ಅಗತ್ಯವಾಗಿದ್ದು, ಅಂತಹಸಮಯವನ್ನು ತೋರಿಸುವ ವಾಚ್ ಕಾರ್ಯವನ್ನು ಮಾಡುತ್ತಿರುವುದರಿಂದ ಪ್ರತಿಯೊಬ್ಬರೂ ಅದನ್ನು ಇಷ್ಟಪಡು ತ್ತಾರೆ. ಅಂತಹ ವಾಚ್‌ಗಳ ಕೌಂಟರ್ ಮುಳಿಯ ಸಂಸ್ಥೆ ತೆರೆಯುತ್ತಿರುವುದು ಸಂತೋಷದ ವಿಚಾರವಾಗಿದೆ. ಜನತೆಯ ಪ್ರೀತಿ-ವಿಶ್ವಾಸವನ್ನು ಬೆಳೆಸುವ ಜತೆಗೆ ನಗುಮೊಗದ ಸೇವೆಯಿಂದ ಮುಳಿಯ ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದ್ದು, ಇನ್ನಷ್ಟು ಬೆಳೆಯಲಿ ಎಂದು ಆಶಿಸಿದರು.

ಮುಳಿಯ ಸಂಸ್ಥೆಯ ಆಡಳಿತ ನಿರ್ದೇಶಕ ಮುಳಿಯ ಕೃಷ್ಣನಾರಾಯಣ ಪ್ರಸ್ತಾವನೆಗೈದು, ಗ್ರಾಹಕರ ವಿಶ್ವಾಸನೀಯ ಆಭರಣ ಮಳಿಗೆಯಾಗಿರುವ ಮುಳಿಯವು 82 ವರ್ಷಗಳ ಸುದೀರ್ಘ ಅನು

ಟೈಟಾನ್ ಭವದೊಂದಿಗೆ ಕರಾರುವಕ್ಕಾದ ಶುದ್ಧತೆ, ವಿನ್ಯಾಸ, ಗ್ರಾಹಕ ಸ್ನೇಹಿ ಮಳಿಗೆಯ ಮೂಲಕ ಎಲ್ಲರ ಪ್ರೀತಿ-ವಿಶ್ವಾಸವನ್ನು ಗಳಿಸಿಕೊಂಡಿದೆ. ಪುತ್ತೂರುಮಳಿಗೆಯಲ್ಲಿ ಪ್ರಸ್ತುತ ಹೊಸದಾಗಿ ವಾಚ್ ಕೌಂಟರ್ ಪ್ರಾರಂಭಿಸಲಾಗುತ್ತಿದ್ದು ಪ್ರತಿಷ್ಠಿತ ಟೈಟಾನ್ ಬ್ರಾಂಡ್ ಜತೆಗೆ ನೆಬುಲಾ ಗೋಲ್ಡ್ವಾಚ್ ಗಳು ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ ಎಂದರು.

ಶಾಖಾ ಅತಿಥಿಗಳುನೆಬುಲಾಗೋಲ್ಡ್‌ವಾಚ್ ಅನಾವರಣಗೊಳಿಸಿದರು. ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಕೃಷ್ಣನಾರಾಯಣ ಮುಳಿಯ, ಪುತ್ತೂರು ಪ್ರಬಂಧಕ ರಾಘವೇಂದ್ರ ಪಾಟೀಲ್ ವೇದಿಕೆಯಲ್ಲಿದ್ದರು. ಪುತ್ತೂರು ಮಾನಸ ಟೈಮ್ಸ್ ನ ಕೇಶವಮೂರ್ತಿ ಅವರನ್ನು ಸಮ್ಮಾನಿಸಲಾಯಿತು.

ಪುತ್ತೂರು ಮಳಿಗೆಯ ಸಿಬಂದಿ ಹರೀಶ್ ಸ್ವಾಗತಿಸಿದರು. ರಾಜೇಶ್ ಜಿ. ವಂದಿಸಿದರು. ಮೃದುಲಾ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments