ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ, ಪತ್ರಿಕಾ ಗೊಟ್ಟಿ ನಡೆಸದಿರಲು ನಾನು ಪ್ರಧಾನಿ ಮೋದಿ ಅಲ್ಲ; ಮಾರಿಕೊಂಡವರನ್ನು ನಾನು ಮಾರಿಕೊಂಡವರು ಎಂದಿದ್ದೇನೆ ಎಂದ ನಟ, ರಾಜಕಾರಣಿ ಪ್ರಕಾಶ್ರಾಜ್ ಮಾತು ಮುತ್ತು ಎನ್ನಬಹುದು.
ಪಂಜಾಬ್, ಪಡುವಣ ಬಂಗಾಳ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಮಣಿಪುರ, ಪಾಂಡಿಚೇರಿ ಎಂದು ಇಂದು ಉದ್ದಕ್ಕೂ ಬಿಜೆಪಿಗೆ ಮಾರಿಕೊಂಡ ಜನಪ್ರತಿನಿಧಿಗಳವರದ್ದೇ ದೊಡ್ಡ ಸುದ್ದಿ. ಸಂಕಣ ಭಾರತ, ಸಿಕ್ಕಿಂ ಬಿಜೆಪಿಗೆ ಎಟುಕಿದ್ದೇ ಖರೀದಿಯಿಂದ. ಒಬ್ಬ ಶಾಸಕ ಕೂಡ ಇಲ್ಲದೆ ಬಿಜೆಪಿ ಸಿಕ್ಕಿಂನಲ್ಲಿ ಸರಕಾರ ರಚನೆ ಮಾಡಿತ್ತು.
ತೆಂಕಣ ಭಾರತದಲ್ಲಿ ಬಿಜೆಪಿಗೆ ಇನ್ನೂ ನೆಲೆ ಸಿಗದಿರಲು ಮುಖ್ಯ ಕಾರಣ ಪಳಂಬೋಕು ವ್ಯತ್ಯಾಸ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇತ್ತಾದರೂ ಒಮ್ಮೆ ಕೂಡ ಅದು ಸ್ವಂತ ಬಲದಿಂದ ಸರಕಾರ ರಚಿಸಿಲ್ಲ.
ಬಹುತೇಕ ರಾಜ್ಯಗಳಲ್ಲಿ ಸದ್ಯ ಬಿಜೆಪಿಯು ಅಡ್ಡ ಕಸುಬಿನಿಂದ ಹೆಚ್ಚು ರಾಜ್ಯ ಸಭೆ ಸ್ಥಾನ ಗಳಿಸಿದೆ. ಕರ್ನಾಟಕದ ಏಳು ವಿಧಾನ ಪರಿಷತ್ ಸ್ಥಾನಗಳಲ್ಲಿ ಐದು ಕಾಂಗ್ರೆಸ್ಸಿಗೆ ದಕ್ಕಿದೆ. ಐದನೆಯದಕ್ಕೆ ಜೆಡಿಎಸ್, ಬಿಜೆಪಿಗಳ ಅಡ್ಡ ಮತದಾನ ಬೇಕಾಯಿತು.


