HomeFresh Newsಮಂಗಳೂರು: ಜುಲೈ 26ರಂದು ಶ್ರೀಮಂತ ರಾಜಗುಳಿಗ ಕ್ಷೇತ್ರದ ವತಿಯಿಂದ ಆಟಿಡೊಂಜಿ ದಿನ, ದಶಮ ಸಂಭ್ರಮ ಕಾರ್ಯಕ್ರಮ

ಮಂಗಳೂರು: ಜುಲೈ 26ರಂದು ಶ್ರೀಮಂತ ರಾಜಗುಳಿಗ ಕ್ಷೇತ್ರದ ವತಿಯಿಂದ ಆಟಿಡೊಂಜಿ ದಿನ, ದಶಮ ಸಂಭ್ರಮ ಕಾರ್ಯಕ್ರಮ

ತುಳುನಾಡಿನ ಆಟಿ ತಿಂಗಳ ಆಚರಣೆಯ ಭಾಗವಾಗಿ ಮಂಗಳೂರಿನ ಮೂಡುಮನೆ ಬಂದಲೆ-ಪಚ್ಚನಾಡಿಯ ಶ್ರೀಮಂತ ರಾಜಗುಳಿಗ ಕ್ಷೇತ್ರದಲ್ಲಿ ’ಆಟಿದೊಂಜಿ ದಿನ’ ಹಾಗೂ ದಶಮ ಸಂಭ್ರಮದ ಪ್ರಯುಕ್ತ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮಂಗಳೂರಿನ ಪಚ್ಚನಾಡಿಯ ಶ್ರೀಮಂತ ರಾಜಗುಳಿಗ ಕ್ಷೇತ್ರ ಪ್ರಾಂಗಣದಲ್ಲಿ ಜುಲೈ 26, ರವಿವಾರದಂದು ಬೆಳಿಗ್ಗೆ 8.30 ರಿಂದ ಸಂಜೆ 6.00ರವರೆಗೆ ‘ಆಟಿದೊಂಜಿ ದಿನ’ ಸಂಭ್ರಮವು ವಿಜೃಂಭಣೆಯಿಂದ ನಡೆಯಲಿದೆ.

ಗುರುಪುರದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರ ದಿವ್ಯ ಆಶೀರ್ವಚನದೊಂದಿಗೆ ಸಭಾ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಉದ್ಯಮಿಗಳು ಸೇರಿದಂತೆ ಹಲವು ಗಣ್ಯಾತಿಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ವಿಶೇಷ ಸಂದರ್ಭದಲ್ಲಿ ಸಮಾಜದ ಗೌರವಾನ್ವಿತ ಸಾಧಕರೊಬ್ಬರಿಗೆ ’ಬಂದಲೆ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಜೊತೆಗೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಗ್ರಾಮದ ಅಶಕ್ತರಿಗೆ ನೆರವು ಹಸ್ತಾಂತರ ಕಾರ್ಯಕ್ರಮವು ಜರುಗಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments