Homeಕರಾವಳಿಮೀಯಪದವಿಯ ಯುವಕನ ಅಪೂರ್ವ ಸಾಧನೆ: ಬೈಕ್‌ನಲ್ಲೇ 18,೦೦೦ ಕಿ.ಮೀ ಪ್ರಯಾಣಿಸಿ 7 ಜ್ಯೋತಿರ್ಲಿಂಗ ದರ್ಶನ ಪಡೆದ...

ಮೀಯಪದವಿಯ ಯುವಕನ ಅಪೂರ್ವ ಸಾಧನೆ: ಬೈಕ್‌ನಲ್ಲೇ 18,೦೦೦ ಕಿ.ಮೀ ಪ್ರಯಾಣಿಸಿ 7 ಜ್ಯೋತಿರ್ಲಿಂಗ ದರ್ಶನ ಪಡೆದ ಮಂಗಳೂರಿನ BBA ವಿದ್ಯಾರ್ಥಿ

“ಸಾಧಿಸಬೇಕೆಂಬ ಛಲವಿದ್ದರೆ ವಯಸ್ಸು ಅಡ್ಡಿಯಾಗುವುದಿಲ್ಲ” ಎಂಬುದಕ್ಕೆ ಉತ್ತಮ ಉದಾಹರಣೆಯಾಗಿ ಹೊರಹೊಮ್ಮಿದ್ದಾರೆ ಮೀಪದವು ಸಮೀಪದ ಮದಂಗಲ್ಲಿನ ಯುವಕ ಆದರ್ಶ್ ಮದಂಗಲ್ಲು. ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (SDM) ಕಾಲೇಜಿನ BBA ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿರುವ ಆದರ್ಶ್, ತಮ್ಮ ಕಾಲೇಜು ರಜಾದಿನಗಳನ್ನು ವ್ಯರ್ಥ ಮಾಡದೆ ಬೈಕ್‌ನಲ್ಲಿ ಏಕಾಂಗಿಯಾಗಿ ದೇಶ ಪರ್ಯಟನ ಮಾಡುವ ಮೂಲಕ ಕರಾವಳಿಗೆ ಹೆಮ್ಮೆ ತಂದಿದ್ದಾರೆ.

ಸಾಮಾನ್ಯವಾಗಿ ಯುವಕರು ರಜಾದಿನಗಳಲ್ಲಿ ವಿಶ್ರಾಂತಿ ಅಥವಾ ವಿನೋದದಲ್ಲಿ ತೊಡಗಿದರೆ, ಆದರ್ಶ್ ಮಾತ್ರ ವಿಶಿಷ್ಟ ಹವ್ಯಾಸವನ್ನು ಮೈಗೂಡಿಸಿಕೊಂಡಿದ್ದಾರೆ. ವಿಶೇಷವೆಂದರೆ, ಈ ಬೃಹತ್ ಸಾಹಸ ಯಾತ್ರೆಗೆ ತಗುಲುವ ಸಂಪೂರ್ಣ ಖರ್ಚು-ವೆಚ್ಚವನ್ನು ಅವರು ತಮ್ಮ ಕಾಲೇಜು ದಿನಗಳಲ್ಲಿ ಸ್ವತಃ ದುಡಿದು ಸಂಪಾದಿಸಿದ ಹಣದಿಂದಲೇ ಭರಿಸುತ್ತಿದ್ದಾರೆ. ಯುವಜನತೆಗೆ ಇವರ ಈ ಸ್ವಾವಲಂಬನೆ ನಿಜಕ್ಕೂ ಮಾದರಿ.

ಆದರ್ಶ್ ಮದಂಗಲ್ಲು ಅವರು ಶ್ರೀ ಕೇಶವ ಪ್ರಕಾಶ್ ಮದಂಗಲ್ಲು ಹಾಗೂ ಪ್ರಸ್ತುತ ‘ಕ್ಯಾಂಪ್ಕೋ’ ನಿರ್ದೇಶಕಿಯಾಗಿರುವ ಶ್ರೀಮತಿ ಸೌಮ್ಯ ಪ್ರಕಾಶ್ ದಂಪತಿಯ ಸುಪುತ್ರ.

ಸಾಹಸ ಮನೋಭಾವ, ಧಾರ್ಮಿಕ ಶ್ರದ್ಧೆ ಹಾಗೂ ಸ್ವಾವಲಂಬನೆಯ ಸಂಕೇತವಾಗಿರುವ ಆದರ್ಶ್ ಅವರ ಈ ಅಪರೂಪದ ಸಾಧನೆ ಇಂದಿನ ಯುವ ಪೀಳಿಗೆಗೆ ದೊಡ್ಡ ಪ್ರೇರಣೆಯಾಗಿದೆ. ಇವರ ಈ ಸಾಹಸ ಯಾತ್ರೆಗೆ ಸಾರ್ವಜನಿಕರಿಂದ ಹಾಗೂ ಕಾಲೇಜು ಬಳಗದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments