“ಕೋಟಿ ತುಳಸಿ ಅರ್ಚನೆ” ಉಡುಪಿಯ ಪರ್ಯಾಯ ಶ್ರೀ ಶಿರೂರು ಶ್ರೀ ಕೃಷ್ಣ ಮಠ ದಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ಶ್ರೇಯೋಭಿವೃದ್ಧಿಗಾಗಿ ನಡೆಯಲಿದೆ.


ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠ ಆಶ್ರಯದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಸಭಾ ಸಹಯೋಗದೊಂದಿಗೆ ಲೋಕ ಕಲ್ಯಾಣಾರ್ಥವಾಗಿ ಶ್ರೀ ಕೃಷ್ಣ ಮಠದಲ್ಲಿ 04-10-2026 ರಂದು ನಡೆಯಲಿರುವ ಕೋಟಿ ತುಳಸಿ ಅರ್ಚನೆ ನಡೆಯಲಿದೆ,ಇದರ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶ್ರೀ ಕೃಷ್ಣ ಮಠದ ಕನಕ ಮಂಟಪದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ದಿವಾನರಾದ ಉದಯ ಕುಮಾರ್ ಸರಳತ್ತಾಯ ಹಾಗೂ ಉಡುಪಿ ಬ್ರಾಹ್ಮಣ ಸಭಾದ ಗೌರವ ಅಧ್ಯಕ್ಷರು ಮಂಜುನಾಥ ಉಪಾಧ್ಯ ,ಅಧ್ಯಕ್ಷರು ಶ್ರೀಕಾಂತ್ ಉಪಾಧ್ಯ ,ಕಾರ್ಯದರ್ಶಿ ದುರ್ಗಾಪ್ರಸಾದ್ ,ಕೋಶಾಧಿಕಾರಿ ಹಯವದನ ಭಟ್,
ಹಿರಿಯ ವಕೀಲರು ಜಯಪ್ರಕಾಶ್ ಕೆದ್ಲಾಯ ,ಜಿಲ್ಲಾ ಅಧ್ಯಕ್ಷರು ಸಂದೀಪ್ ಮಂಜ ಮತ್ತು ಎಲ್ಲಾ ವಲಯದ ಅಧ್ಯಕ್ಷರು ಕಾರ್ಯದರ್ಶಿ ಪದಾಧಿಕಾರಿಗಳು ಉಪಸ್ಥಿತರಿದ್ದರು.


