ಮೂಡುಬಿದಿರೆ: ಕಳೆದ ಮೂರು ದಿನಗಳಿಂದ ಜೋರಾಗಿ ಬೀಸುತ್ತಿರುವ ಗಾಳಿ ಮಳೆಗೆ ಶಿತಾ೯ಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿಮುಂಜೆಬೈಲು ಎಂಬಲ್ಲಿ ಭಾನುವಾರ ದಲಿತ ಸಮುದಾಯದ ಸದಾನಂದ ಎಂಬವರ ಮನೆಯ ಶೀಟು ಹಾರಿ ಹೋಗಿ ಮನೆ ಸಂಪೂರ್ಣ ಹಾನಿಯಾಗಿದೆ.
ಮನೆಯಲ್ಲಿ ಸದಾನಂದ ಅವರ ಪತ್ನಿ ಹಾಗೂ ನಾಲ್ವರು ಮಕ್ಕಳಿದ್ದು ಗಾಳಿ ಮಳೆಯ ಸಂದರ್ಭ ಅವರು ಪಕ್ಕದ ಮನೆಯಲ್ಲಿದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರನ್ನಲಾಗಿದೆೆ.
ಘಟನಾ ಸ್ಥಳಕ್ಕೆ ಶಿತಾ೯ಡಿ ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಕುಮಾರ್, ಗ್ರಾಮ ಲೆಕ್ಕಿಗರಾದ ನಿಶ್ಮಿತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


