ಕಳೆದ ಹಲವಾರು ವರುಷಗಳಿಂದ ಮಸ್ಕಿಯ ವಿನಾಯಕ ಹೋಟೆಲ್ ಎದುರುಗಡೆ ಕಾರ್ಯನಿರ್ವಹಿಸುತ್ತಿದ್ದ ಶ್ರೀ ದುರ್ಗಾಂಬಾ ಟ್ರೇಡರ್ಸ್ ವ್ಯಾಪಾರ ಮಳಿಗೆಯು ಈಗ ಅವರ ಸ್ವಂತ ವಿಶಾಲ ಜಾಗವಾದ ಅರೆಹೊಳೆಯಲ್ಲಿ ಶುಭಾರಂಭಗೊಂಡಿತು.

ನೂತನ ಮಳಿಗೆಯಲ್ಲಿ ಹೊಸ ಹೊಸ ಮಾದರಿಯ ಪಿಠೋಪಕರಣಗಳು, ಸಾನಿಟರಿ ವಸ್ತುಗಳು, ಪೈಂಟ್ಸ್ ಹಾಗೂ ಗುಣಮಟ್ಟದ ಕಟ್ಟಡ ಸಾಮಗ್ರಿಗಳು ಕೈಗೆಟುಕುವ ದರದಲ್ಲಿ ಲಭ್ಯವಾಗಲಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ ಪಿಠೋಪಕರಣಗಳ ಮೇಲೆ ಶೇಕಡಾ ಇಪ್ಪತ್ತರಷ್ಟು ಕಡಿಮೆ ಬೆಲೆಯಲ್ಲಿ ಮಾರಾಟ ಹಾಗೂ ಉಚಿತವಾಗಿ ಸಾಗಾಟದ ವ್ಯವಸ್ಥೆ ಇದೆ.
ಗ್ರಾಹಕರು ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕೇಂದು ಸಂಸ್ಥೆಯ ಮಾಲಕ ಸಮರ ಶೆಟ್ಟಿ ತಿಳಿಸಿದ್ದಾರೆ.
