ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಮಡ್ಯಂಗಳ ನಿವಾಸಿ ಬಾಬು ರೈ ಯವರು ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದು, ವೀಪರೀತ ಮಳೆಯಿಂದ 15 ದಿನಗಳ ಹಿಂದೆ ಮನೆಯು ಪೂರ್ತಿ ಕುಸಿದಿದ್ದು ವಾಸಿಸಲು ಮನೆ ಇಲ್ಲದಂತಾಗಿದೆ.



ಇವರಿಗೆ ಸರಕಾರದಿಂದ ಇದುವರೆಗೂ ಯಾವುದೇ ಪರಿಹಾರವೂ ಸಿಕ್ಕಿರುವಿದಿಲ್ಲ , ಇವರ ಈ ಪರಿಸ್ಥಿತಿ ಕಂಡು ಅಶೋಕ್ ರೈ ಸೇವಾ ಟ್ರಸ್ಟ್ ಕೌಡಿಚ್ಚಾರ್ ಘಟಕದ ಅಭಿಮಾನಿ ಬಳಗದವರು ಉದ್ಯಮಿ , ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಯವರ ಗಮನಕ್ಕೆ ತಂದಾಗ , ಕೂಡಲೇ ಸ್ಪಂದಿಸಿದ ಅಶೋಕ್ ಕುಮಾರ್ ರೈ ಯವರು ಖುದ್ದು ಭೇಟಿ ನೀಡಿ ಅವರ ಪರಿಸ್ಥಿತಿ ವೀಕ್ಷಿಸಿದರು. ಇವರ ಈ ಬಡಕುಟುಂಬದ ಕಷ್ಟವನ್ನು ನೋಡಿ ವಾಸಿಸಲು ಮನೆ ನಿರ್ಮಿಸಿಕೊಡುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಭುಜಂಗ ರೈ ಮಡ್ಯಂಗಳ ಪ್ರಕಾಶ ರೈ ಕೊಯಿಲ , ಜನಾರ್ದನ ಬಳ್ಳಿಕಾನ, ಗುಗನೇಶ್ವರ ಕೌಡ್ಡಿಚಾರ್ ಸಿಆರ್ ಸಿ ಕಾಲೋನಿ , ಅಮೃತ್ ರೈ , ರಿತೇಶ್ ಕುಮಾರ್ ರೈ ಮಡ್ಯಂಗಳ ಮತ್ತು ಪ್ರೇಮಲತ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
