HomeFresh Newsಪಡುಬಿದ್ರಿಯಲ್ಲಿ ನೂತನ ಶ್ರೀ ಮಹಮ್ಮಾಯಿ ತೆರಿಗೆ ಪಾವತಿದಾರರ ಮತ್ತು ಉಳಿತಾಯಗಾರರ ಕ್ರೆಡಿಟ್ ಕೂ- ಅಪರೇಟಿವ್ ಸೊಸೈಟಿಯ...

ಪಡುಬಿದ್ರಿಯಲ್ಲಿ ನೂತನ ಶ್ರೀ ಮಹಮ್ಮಾಯಿ ತೆರಿಗೆ ಪಾವತಿದಾರರ ಮತ್ತು ಉಳಿತಾಯಗಾರರ ಕ್ರೆಡಿಟ್ ಕೂ- ಅಪರೇಟಿವ್ ಸೊಸೈಟಿಯ ನೂತನ ಪ್ರಧಾನ ಕಚೇರಿಯು ಉದ್ಘಾಟನೆ

ಪಡುಬಿದ್ರಿ: ಭಾರತದ ಆರ್ಥಿಕತೆಯು ಪ್ರಾಥಮಿಕ ಕೃಷಿ ಆಧಾರಿತ ಆಗಿರುವುದರಿಂದ ಹೆಚ್ಚಿನ ಸಹಕಾರಿ ಬ್ಯಾಂಕುಗಳು ಈ ವಿಭಾಗವನ್ನು ಪೊರೃೆಸುತಿದೆ .ಸಹಕಾರ ಮತ್ತು ಸಮಾನತೆಯ ತತ್ವಗಳ ಮೇಲೆ ಕಾರ್ಯ ನಿರ್ವಹಿಸುವ ಭಾರತದ ಸಹಕಾರಿ ಬ್ಯಾಂಕುಗಳುವಿಶೇಷವಾಗಿ ಗ್ರಾಮೀಣ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನಿಲ್ಲಬೇಕು,ಈ ಬ್ಯಾಂಕುಗಳು ಲಾಭಗಳಿಸುವುದಕ್ಕಿಂತ ಹೆಚ್ಚಾಗಿ ಜನರಿಗೆ ಸೇವೆ ಸಲ್ಲಿಸುವುದನ್ನು ಪ್ರಮುಖ ಗುರಿಯಾಗಿ ಹೊಂದಬೇಕು. ರಾಜ್ಯ ಮಟ್ಟದ ಅತ್ಯುನ್ನತ ಸಹಕಾರಿ ಬ್ಯಾಂಕ್ ಅಗಿ ಮೂಡಿಬರಲಿ ಎಂದು ಡಿ.ಕೆ ಗ್ರೂಫ್ ಅಫ್ ಕಂಪನಿಸ್ ಅಡಳಿತ ನಿರ್ದೇಶಕ ಅಲ್ವಿನ್ ಜೋಯಲ್ ನೊರಾನ್ಹ ಅವರು ಮೇ.17 ಭಾನುವಾರದಂದು. ಪಡುಬಿದ್ರಿಯ ಅಗ್ರಜ ಮಂಜುಶ್ರೀ ಬಿಲ್ಡಿಂಗ್ ನ ಪ್ರಥಮ ಮಹಡಿಯಲ್ಲಿ ನೂತನವಾಗಿ ಪ್ರಾರಂಭಗೊಂಡ ಶ್ರೀ ಮಹಮ್ಮಾಯಿ ತೆರಿಗೆ ಪಾವತಿದಾರರ ಮತ್ತು ತೆರಿಗೆ ಉಳಿತಾಯಗಾರರ ಕ್ರೆಡಿಟ್ ಕೊ-ಅಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿದರು‌.


ಗ್ರಾಮೀಣ ಪ್ರದೇಶದ ಸಹಕಾರಿ ಬ್ಯಾಂಕುಗಳು ಕೇವಲ ಹಣಕಾಸಿನ ವಹಿವಾಟು ನಡೆಸುವ ಸಂಸ್ಥೆಗಳಾಗಬಾರದು..ಗ್ರಾಮೀಣ ಪ್ರದೇಶದ ಬಡತನ ನಿರ್ಮೂಲನೆಗೆ , ಕೃಷಿಕರ ಅಭಿವೃದ್ಧಿಗೆ ಹಾಗೂ ದೇಶದ ಆರ್ಥಿಕತೆಯ ತಳಹದಿಯನ್ನು ಬಲಪಡಿಸುವ ಗುರಿಹೊಂದುವುದು ಅತ್ಯಗತ್ಯವಾಗಿದೆ
ಎಂದು ಉಡುಪಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ನವೀನ್ ಚಂದ್ರ ಜೆ. ಶೆಟ್ಚಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಕೆ ಟ್ರಾನ್ಸ್ ಪೋರ್ಟ್ ಕಂಪೆನಿಯ ಮಾಲಕಿ ಲಿಜ್ಜಿ ಡಿ’ಸೋಜ ವಹಿಸಿದ್ದರು. ಈ ಸಂದರ್ಭದಲ್ಲಿ ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್ , ಉದ್ಯಮಿ ದೀಪಕ್ ಎರ್ಮಾಳ್ , ರೋಟರಿ ವಲಯ ಪೂರ್ವ ಸಹಾಯಕ ಗವರ್ನರ್ ಗಣೇಶ್ ಅಚಾರ್ಯ ಉಚ್ಚಿಲ , ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಿಶ್ವಾಸ್ ಅಮೀನ್, ಸೆಂಟ್ರಲ್‌ ಬ್ಯಾಂಕ್ ನಿವೃತ್ತ ಸೀನಿಯರ್ ಮೆನೇಜರ್ ರವೀಂದ್ರ ಶೆಟ್ಚಿ ಮುಂಬಯಿ , ಕಾಪು ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ರಮೀಜ್ ಹುಸೇನ್ , ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುಲ್‌ ಹಮೀದ್ , ಸಂಸ್ಥೆಯ ಪಾಲುದಾರ ಸಂತೋಷ್ ಪಡುಬಿದ್ರಿ , ವ್ಯವಸ್ಥಾಪಕ ಪಾಲುದಾರರಾದ ಪ್ರೇಮ ಕೋಟ್ಯಾನ್ ಸಂಸ್ಥೆಯ ಉಪಾಧ್ಯಕ್ಷ ಶರತ್ ಶೆಟ್ಚಿ ಎರ್ಮಾಳ್ ಉಪಸ್ಥಿತರಿದ್ದರು.
ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು‌‌.‌ಸುಧಾಕರ್. ಕೆ ನಿರೂಪಿಸಿ ವಂದಿಸಿದರು…

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments