HomeFresh Newsಮಾ.30ರಂದು ಆಲೆಟ್ಟಿಯ ಕುಡೆಕಲ್ಲಿನಲ್ಲಿ ‘ಅರೆಭಾಷಿಕರ ಐನ್ ಮನೆ ಐಸಿರಿ’ ಕಾರ್ಯಕ್ರಮ

ಮಾ.30ರಂದು ಆಲೆಟ್ಟಿಯ ಕುಡೆಕಲ್ಲಿನಲ್ಲಿ ‘ಅರೆಭಾಷಿಕರ ಐನ್ ಮನೆ ಐಸಿರಿ’ ಕಾರ್ಯಕ್ರಮ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ಆಶ್ರಯದಲ್ಲಿ ಆಲೆಟ್ಟಿ ಗ್ರಾಮದ ಕುಡೆಕಲ್ಲಿನಲ್ಲಿ ಅರೆಭಾಷಿಕರ ಐನ್ ಮನೆ ಐಸಿರಿ ಕಾರ್ಯಕ್ರಮ ನಡೆಯಲಿದ್ದು, ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿರುವ ರಂಗಮಯೂರಿಯ ಕಲಾ ಶಾಲೆಯಲ್ಲಿ ‌ಮಾ.21ರಂದು ನಡೆಯಿತು.

ನಿವೃತ್ತ ಪ್ರಾಂಶುಪಾಲೆ ಡಾ.ರೇವತಿ ನಂದನ್ ರವರು ಆಮಂತ್ರಣ ಬಿಡುಗಡೆ ಮಾಡಿದರು. ಅಕಾಡೆಮಿಯ ಈ ಪ್ರಯೋಗ ಯಶಸ್ವಿಯಾಗಿ ಭಾಷೆಯ ಬೆಳವಣಿಗೆ ಇನ್ನಷ್ಟು ವಿಸ್ತರಿಸಲಿ ಎಂದು ಹೇಳಿದರು. ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು. “ಭಾಷೆಯ ಬೆಳವಣಿಗೆಯೊಂದಿಗೆ ಐನ್ ಮನೆ ಸಂಸ್ಕ್ರತಿ ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದರು.

ಕಾರ್ಯಕ್ರಮ ಸದಸ್ಯ ಸಂಚಾಲಕರಾದ ತೇಜಕುಮಾರ್ ಕುಡೆಕಲ್ಲು ಕಾರ್ಯಕ್ರಮದ ಕುರಿತು ಮಾತನಾಡಿದರು. ಆಮಂತ್ರಣ ಬಿಡುಗಡೆಗೊಳಿಸಿದ ಡಾ.ರೇವತಿ ನಂದನ್ ರನ್ನು ಅಕಾಡೆಮಿ ವತಿಯಿಂದ ಗೌರವಿಸಲಾಯಿತು. ಅಕಾಡೆಮಿ ಸದಸ್ಯರುಗಳಾದ ಚಂದ್ರಶೇಖರ ಪೇರಾಲು, ಶ್ರೀಮತಿ ಲತಾ ಪ್ರಸಾದ್ ಕುದ್ಪಾಜೆ, ಲೋಕೇಶ್ ಊರುಬೈಲು ಉಪಸ್ಥಿತರಿದ್ದರು.

ಅಕಾಡೆಮಿ ಸದಸ್ಯರಾದ ಡಾ.ಎನ್.ಎ.ಜ್ಞಾನೇಶ್ ಸ್ವಾಗತಿಸಿದರು. ಸದಸ್ಯ ಸಂಚಾಲಕ ವಿನೋದ್ ಮೂಡಗದ್ದೆ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments