HomeFresh Newsಪೌರ ಕಾರ್ಮಿಕರಿಗೆ ಸಂಸದರಿಂದ ಹೆಲಿಕಾಪ್ಟರ್ ಪ್ರವಾಸದ ವಿಶೇಷ ಅವಕಾಶ

ಪೌರ ಕಾರ್ಮಿಕರಿಗೆ ಸಂಸದರಿಂದ ಹೆಲಿಕಾಪ್ಟರ್ ಪ್ರವಾಸದ ವಿಶೇಷ ಅವಕಾಶ

ಹಾಸನ: ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಹೆಲಿಕಾಪ್ಟರ್ ಪ್ರವಾಸದಲ್ಲಿ ನಗರ ಸ್ವಚ್ಛತೆಗೆ ದಿನರಾತ್ರಿ ಶ್ರಮಿಸುತ್ತಿರುವ ಮಹಾನಗರ ಪಾಲಿಕೆ ಪೌರ ಕಾರ್ಮಿಕರನ್ನು ಸಂಸದ ಶ್ರೇಯಸ್ ಪಟೇಲ್ ಗೌರವಿಸಿದ್ದಾರೆ.

ನಗರದ ಹೊಳಪಿಗಾಗಿ ಶ್ರಮಿಸುವ ಈ “ಮೌನ ಯೋಧರ” ಸೇವೆಗೆ ಕೃತಜ್ಞತೆಯ ಸೂಚಕವಾಗಿ, ಸಂಸದರು ನಾಲ್ವರು ಪೌರ ಕಾರ್ಮಿಕರಿಗೆ ಹೆಲಿಕಾಪ್ಟರ್ ಪ್ರವಾಸದ ಅವಕಾಶ ನೀಡಿದ್ದಾರೆ. ಆಕಾಶದಲ್ಲಿ ಹಾರಾಡಿದ ಹೆಲಿಕಾಪ್ಟರ್ ಪ್ರವಾಸವು ಕೇವಲ ಪ್ರವಾಸವಲ್ಲ, ಪೌರ ಕಾರ್ಮಿಕರ ಬೆವರಿನ ಬೆಲೆಗೆ ಸಲ್ಲಿಸಿದ ನಮನವಾಗಿದೆ.

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, “ನಮ್ಮ ನಗರ ಸ್ವಚ್ಛತೆಯ ನಿಜವಾದ ಹೀರೋಗಳು ಪೌರ ಕಾರ್ಮಿಕರು. ಅವರಿಗೆ ತಲೆಬಾಗುವುದು ನನ್ನ ಗೌರವ. ಆಗಸದಿಂದ ಹಾಸನ ನಗರವನ್ನು ನೋಡಿದ ಅವರ ಮುಖದಲ್ಲಿ ಕಂಡ ಸಂತೋಷ ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ” ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments