ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ 10-12-2023 ರಿಂದ 24-12-2023 ರ ವರೆಗೆ ಚಂಪಾಷಷ್ಠಿ ಮಹೋತ್ಸವ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ
ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ಚಂಪಾಷಷ್ಠಿ ಮಹೋತ್ಸವವು ನಡೆಯಲಿದೆ.

ಇದೇ ಶೋಭಕೃತ್ ನಾಮ ಸಂವತ್ಸರದ ಕಾರ್ತಿಕ ಬಹುಳ ದ್ವಾದಶಿ ಆದಿತ್ಯವಾರ 10-12-2023 ರಿಂದ ಲಾಗ್ಯಾತು ಮಾರ್ಗಶಿರ ಶುದ್ಧ ದ್ವಾದಶಿ ಆದಿತ್ಯವಾರ 24-12-2023ರ ವರೆಗೆ ಈ ಕೆಳಗಿನ ವಿವರದಂತೆ ವಾರ್ಷಿಕ ಜಾತ್ರಾ ಉತ್ಸವಾದಿಗಳು ನಡೆಯಲಿದೆ. ಭಗವತ್ಸಂಕಲ್ಪ ಪ್ರಕಾರ ನಡೆಯತಕ್ಕ ಈ ಮಹೋತ್ಸವಗಳಿಗೆ ಭಕ್ತರು ಇಷ್ಟಮಿತ್ರರೊಡಗೂಡಿ ಆಗಮಿಸಿ ಶ್ರೀ ದೇವರ ಮೂಲಮೃತ್ತಿಕಾ ಗಂಧ-ಪ್ರಸಾದವನ್ನು ಸ್ವೀಕರಿಸಿ. ಶ್ರೀ ಸುಬ್ರಹ್ಮಣ್ಯ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ನೀಡಿದೆ.

ಕಾರ್ಯಕ್ರಮಗಳ ವಿವರಗಳು ಈ ಕೆಳಗಿನಂತಿವೆ.

10-12-2023 ಆದಿತ್ಯವಾರ – ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ

11-12-2023 ಸೋಮವಾರ –
ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ

12-12-2023 ಮಂಗಳವಾರ –
ಲಕ್ಷದೀಪೋತ್ಸವ

13-12-2023 ಕ್ಕೆ
ಶೇಷವಾಹನೋತ್ಸವ

14-12-2023 ರಂದು
ಅಶ್ವವಾಹನೋತ್ಸವ

15-12-2023 ರಂದು ಮಯೂರ ವಾಹನೋತ್ಸವ

16-12-2023 ರಂದು ರಾತ್ರಿ ಹೂವಿನ ತೇರಿನ ಉತ್ಸವ

17-12-2023 ಆದಿತ್ಯವಾರದಂದು ರಾತ್ರಿ ಪಂಚಮಿ ರಥೋತ್ಸವ, ತೈಲಾಭ್ಯಂಜನ,

18-12-2023 ರಂದು ಪ್ರಾತಃ ಕಾಲ ಚಂಪಾಷಷ್ಠಿ ಮಹಾರಥೋತ್ಸವ

19-12-2023 ಮಂಗಳವಾರದಂದು ಶ್ರೀ ದೇವರ ಅವಭೃತೋತ್ಸವ ನೌಕಾವಿಹಾರ

4-12-2023 ಆದಿತ್ಯವಾರದಂದು
ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ ಕಾರ್ಯಗಳು ನಡೆಯಲಿದೆ.

ದಿನಾಂಕ 09-12-2023 ಶನಿವಾರ “ಮೂಲಮೃತ್ತಿಕಾ” ಪ್ರಸಾದ ವಿತರಣೆ ಮತ್ತು ಕಿರುಷಷ್ಠಿ ಮಹೋತ್ಸವವು 16-01-2024 ರಂದು ಜರಗಲಿದೆ.

ದಿನಾಂಕ 10-12-2023 ರಿಂದ 12-12-2023 ರ ವರೆಗೆ ಭಕ್ತರು ಸಲ್ಲಿಸುವ ಹಸಿರು ಕಾಣಿಕೆಗಳನ್ನು ಸ್ವೀಕರಿಸಲಾಗುತ್ತದೆ ಎಂದು ದೇವಸ್ಥಾನದಿಂದ ಹೊರಡಿಸಲಾದ ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಲಾಗಿದೆ.

ಸೇವೆಗಳ ವಿವರ

  1. ಮಹಾರಥೋತ್ಸವ-25,000-00
  2. ಚಿಕ್ಕ ರಥೋತ್ಸವ-8,000-00
  3. ಚಂದ್ರಮಂಡಲ ಉತ್ಸವ-6,000-00
  4. ಹೂವಿನ ತೇರಿನ ಉತ್ಸವ-5,000-00
  5. ಬಂಡಿ ಉತ್ಸವ-3,000-00
  6. ಮಹಾಭಿಷೇಕ-6,000-00
  7. ದೀಪಾರಾಧನೆ,ಪಾಲಕಿ ಉತ್ಸವ-2,500-00
  8. ಮಹಾಪೂಜೆ,ಪಾಲಕಿ ಉತ್ಸವ-1,500-00
  9. ಸಪರಿವಾರ ಸೇವಾ-2,000-00
  10. ನಾಗಪ್ರತಿಷ್ಠೆ-400-00
  11. ಆಶ್ಲೇಷ ಬಲಿ-400-00
  12. ಮಹಾಪೂಜೆ (ಇಡೀ ದಿನದ್ದು)- 400-00
  13. ಮಹಾಪೂಜೆ (ಮಧ್ಯಾಹ್ನ)-250-00
  14. ಪಂಚಾಮೃತ ಅಭಿಷೇಕ-75-00
  15. ರುದ್ರಾಭಿಷೇಕ-75-00
  16. ಕ್ಷೀರಾಭಿಷೇಕ-50-00
  17. ಶೇಷ ಸೇವೆ-100-00
  18. ಹರಿವಾಣ ನೈವೇದ್ಯ-100-00
  19. ಕಾರ್ತಿಕ ಪೂಜೆ-50-00
  20. ಪಂಚಕಜ್ಜಾಯ-20-00
  21. ಲಾಡು ಪ್ರಸಾದ-20-00
  22. ತೀರ್ಥ ಬಾಟ್ಲಿ-10-00

ಮನಿಯಾರ್ಡರ್, ಡಿ.ಡಿ., ಚೆಕ್ಕು ಮೂಲಕ ಕಾಣಿಕೆ ರೂ. 50.00 ಯಾ ಅದಕ್ಕಿಂತ ಅಧಿಕ ಹಣ ಕಳುಹಿಸುವ ಭಕ್ತಾದಿಗಳಿಗೆ ಅಂಚೆ ಮೂಲಕ ಪ್ರಸಾದವನ್ನು ಕಳುಹಿಸಲಾಗುವುದು.:ಶ್ರೀ ದೇವಳದ ಇ-ಹುಂಡಿ ಸೇವೆಗೆ ಯಾವುದೇ ಯುಪಿಐ ಮೂಲಕ ಮೊತ್ತವನ್ನು ಪಾವತಿ ಮಾಡಬಹುದು ಎಂದು ತಿಳಿಸಲಾಗಿದೆ.

Related Posts

Leave a Reply

Your email address will not be published.