HomeFresh Newsನೆಲ್ಯಾಡಿ:ಪೆರಿಯಶಾಂತಿ ಲಾರಿಗಳ ಡಿಕ್ಕಿ-ಚಾಲಕನಿಗೆ ಗಾಯ

ನೆಲ್ಯಾಡಿ:ಪೆರಿಯಶಾಂತಿ ಲಾರಿಗಳ ಡಿಕ್ಕಿ-ಚಾಲಕನಿಗೆ ಗಾಯ

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಂದ ಇನ್ನೊಂದು ಲಾರಿ ಡಿಕ್ಕಿಯಾಗಿ, ಚಾಲಕ ಗಾಯಗೊಂಡ ಘಟನೆ ಮಂಗಳವಾರದಂದು ರಾತ್ರಿ ನಡೆದಿದೆ.

ಹಾಸನ ನಿವಾಸಿ ಹೆಚ್.ಎಸ್.ಪರಮೇಶ ಎಂಬವರು ಅಶೋಕ್ ಲೈಲೇಂಡ್ ಲಾರಿಯಲ್ಲಿ ಮಂಗಳೂರಿನ ಕಿನ್ನಿಗೋಳಿಯಿಂದ ಸುಣ್ಣ ತುಂಬಿಸಿಕೊಂಡು ಸಕಲೇಶಪುರಕ್ಕೆ ರಾಷ್ಠೀಯ ಹೆದ್ದಾರಿ 75ರಲ್ಲಿ ಹೋಗುತ್ತಿದ್ದವರು ಕೌಕ್ರಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಹಿಂಬದಿಯಿಂದ ಮೂರ್ತಿ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಲಾರಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಎರಡೂ ಲಾರಿಗಳು ಜಖಂಗೊಂಡಿದ್ದು ಹಿಂಬದಿಯಿಂದ ಡಿಕ್ಕಿಯಾದ ಲಾರಿಯ ಚಾಲಕ ಮೂರ್ತಿ ಎಂಬವರಿಗೆ ಗಾಯವಾಗಿದೆ ಎಂದು ವರದಿಯಾಗಿದೆ.

ಘಟನೆ ಕುರಿತು ಹೆಚ್.ಎಸ್.ಪರಮೇಶ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments