ಕುತ್ತಾರ್ ನಲ್ಲಿ ತೈಲ ಬೆಲೆಯೇರಿಕೆ ಖಂಡಿಸಿ ಪ್ರತಿಭಟನೆ
ತೈಲ ಬೆಲೆಯೇರಿಕೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ, ಕುತ್ತಾರ್ ನಲ್ಲಿರುವ ಇಂಡಿಯನ್ ಪೆಟ್ರೋಲ್ ಪಂಪ್ ಮುಂಭಾಗ ಲಾಕ್ ಡೌನ್ ನಡುವೆಯೇ ಸಾಂಕೇತಿಕವಾಗಿ ಡಿವೈಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್, ಜಿಲ್ಲಾ ಸಮಿತಿ ಸದಸ್ಯ ಆಡ್ವಕೇಟ್ ನಿತಿನ್ ಕುತ್ತಾರ್, ಸಿಐಟಿಯು ನಾಯಕರಾದ ಜಯಂತ್ ನಾಯ್ಕ್, ಇಬ್ರಾಹಿಂ ಮದಕ, ಡಿವೈಎಫ್ಐ ಮುಖಂಡರಾದ ರಝಾಕ್ ಮುಡಿಪು, ಸಂಕೇತ್ ಕಂಪ, ಕಾರ್ತಿಕ್ ದೇಸೋಡಿ, ಎಸ್.ಎಫ್.ಐ ನಾಯಕರಾದ ವಿಕಾಸ್ ಕುತ್ತಾರ್, ತಿಲಕ್ ಕುತ್ತಾರ್ ಪಾಲ್ಗೊಂಡರು.