ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ತುಳು ಎಂ.ಎ. ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಚಂದ್ರಹಾಸ ಕಣಂತೂರು ಅವರು ಪ್ರಥಮ ರ್ಯಾಂಕ್ ಪಡೆದಿರುತ್ತಾರೆ. ಹಂಪನಕಟ್ಟೆಯ ಮಂಗಳೂರು ವಿ.ವಿ.ಸಂಧ್ಯಾ ಕಾಲೇಜಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ವಿದ್ಯಾರ್ಥಿಯಾಗಿದ್ದ ಚಂದ್ರಹಾಸ ಕಣಂತೂರು ಅವರು ತುಳು ಬರಹಗಾರರಾಗಿ , ವಾಗ್ಮಿಯಾಗಿ ಖ್ಯಾತಿ ಪಡೆದವರು. ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಲೆಕ್ಕಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಚಂದ್ರಹಾಸ ಕಣಂತೂರು ಅವರು ಸೇವಾ ನಿವೃತ್ತಿಯ ಬಳಿಕ ಹಂಪನಕಟ್ಟೆಯ ವಿ.ವಿ.ಸಂಧ್ಯಾ ಕಾಲೇಜಿಗೆ ತುಳು ಎಂ.ಎ ವಿದ್ಯಾರ್ಥಿಯಾಗಿ ಸೇರ್ಪಡೆಯಾಗಿದ್ದರು. ಚಂದ್ರಹಾಸ ಅವರು ಸಾಹಿತಿಯಾಗಿ , ಹವ್ಯಾಸಿ ರಂಗಭೂಮಿ ಕಲಾವಿದರಾಗಿ , ಆಕಾಶವಾಣಿ ತುಳು ವಾರ್ತಾ ವಾಚಕರಾಗಿ, ಯಕ್ಷಗಾನ ಕಲಾವಿದರಾಗಿ ಸಂಘಟಕರಾಗಿ ಜನಮನ್ನಣೆ ಪಡೆದವರು. ಅನೇಕ ತುಳು, ಕನ್ನಡ ಕೃತಿಗಳನ್ನು ರಚಿಸಿ ಸಾಹಿತ್ಯ ಕೃಷಿ ಮಾಡಿದವರು .
ಪ್ರಕಟಿತ ಕೃತಿಗಳು :
ಚಂದ್ರಹಾಸ ಕಣಂತೂರು ಅವರ ಪ್ರಕಟಿತ ಕೃತಿಗಳು ಈ ರೀತಿಯಾಗಿದೆ.
- ವೃತ್ತಾಂತ ( ಕವನ ಸಂಕಲನ) , *ಕಣಂತೂರು ಧರ್ಮ ಅರಸು ಶ್ರೀ ತೋಡಕುಕ್ಕಿನಾರ್ (ಕ್ಷೇತ್ರ ಅಧ್ಯಯನ), *ಮೈಮೆ(ಒಂಜಿ ಕೋಪೆ ಪಾಡ್ದನದ ಕತೆಕುಲು), *ತುಳು ಬಾಸೆದ ತಿರ್ಲು (ತುಳು ವ್ಯಾಕರಣ – ಕೆ.ಟಿ.ಆಳ್ವಾರ ಜೊತೆಗೆ), *ಪಂಚ ದ್ರಾವಿಡ ಭಾಷಾ ಜನಪದ ಕತೆಗಳು(ಪ್ರಕಟಣೆ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ).
‘ಪರತಿ ಮಂಗಣೆ ‘ ಕತೆಯು ಮಂಗಳೂರು ವಿಶ್ವವಿದ್ಯಾನಿಲಯದ ದ್ವಿತೀಯ ಪದವಿ ತರಗತಿಯ ಪಠ್ಯಕ್ಕೆ ಸೇರ್ಪಡೆಗೊಂಡಿದೆ


