HomeFresh Newsಆರದಿರಲಿ ಬದುಕು ಆರಾಧನ ತಂಡದಿಂದ ಜೂನ್ ತಿಂಗಳ 99 ನೇ ಯೋಜನೆಯ ಸಹಾಯಧನ ಹಸ್ತಾಂತರ

ಆರದಿರಲಿ ಬದುಕು ಆರಾಧನ ತಂಡದಿಂದ ಜೂನ್ ತಿಂಗಳ 99 ನೇ ಯೋಜನೆಯ ಸಹಾಯಧನ ಹಸ್ತಾಂತರ

ಆರದಿರಲಿ ಬದುಕು ಆರಾಧನ ತಂಡದ ಜೂನ್ ತಿಂಗಳ 99 ನೇ ಯೋಜನೆಯ ಸಹಾಯ ಹಸ್ತ ವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಎಕ್ಕಾರು ನಿವಾಸಿ ಯಾದ ವಿನೋದ್ ಅವರಿಗೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಅವರಿಗೆ ಮಾನವಿಯತೆ ನೆಲೆಯಲ್ಲಿ ಅವರ ಕಷ್ಟವನ್ನು ಮನಗಂಡು ಆರದಿರಲಿ ಬದುಕು ಆರಾಧನ ತಂಡದಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲಿನಲ್ಲಿ ಇಪ್ಪತ್ತೈದು ಸಾವಿರ ರೂಪಾಯಿ ಗಳ ಸಹಾಯಧನ ನೀಡಲಾಯಿತು.

ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಸದಸ್ಯರಾದ ದೀನ್ ರಾಜ್, ಬಸವರಾಜ ಮಂತ್ರಿ, ಅರುಣ್‌ ಅಜೆಕಾರು, ಮಲ್ಲಿಕಾ, ಸುಕೇಶ್, ಆಶಾ ಸುರೇಂದ್ರ, ಸುನೀತ ಮೂಡುಬಿದಿರೆ, ಭಾಸ್ಕರ ದೇವಾಡಿಗ, ಅಭಿಷೇಕ್ ಶೆಟ್ಟಿ ಐಕಳ, ಗಣೇಶ್ ಪೈ. ಡಾ.ನಾಗರಾಜ ಶೆಟ್ಟಿ ಅಂಬೂರಿ, ಧನಂಜಯ ಶೆಟ್ಟಿ. ನಿಲೇಶ್ ಕಟೀಲು, ಪ್ರವೀಣ್ ಬಂಗೇರ, ಶ್ರೀಕಾಂತ ಭಟ್ ಪೊನ್ನ ಗಿರಿ, ಪ್ರಭಾಕರ ಮಂಗಳೂರು, ದಯಾನಂದ ಮಡೇಕರ್, ಬೀಮಯ್ಯ ಸುಳ್ಯ. ಅಗರಿ ರಾಘವೇಂದ್ರ ರಾವ್, ಭಾಸ್ಕರ ದೇವಸ್ಯ ಹಾಗೂ ದಿನೇಶ್ ಸಿದ್ದಕಟ್ಟೆ ಮತ್ತು ನಾಗರಾಜ ಸಾಲ್ಯಾನ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments