ಮೂಡುಬಿದಿರೆ : ತಾಲೂಕಿನ ಕೆಸರ್ ಗದ್ದೆ ವಾಸಪ್ಪ ಹೋಟೆಲ್ ಮುಂಭಾಗದ ಕ್ರಾಸ್ ನಲ್ಲಿ ಕಿಯಾ ಕಾರು ಮತ್ತು ತುಫಾನ್ ವಾಹನ ಡಿಕ್ಕಿಯಾದ ಘಟನೆ ನಡೆದಿದೆ.
ಬೆಳುವಾಯಿ ಶಾಕಿರ್ ಎಂಬವರು ತನ್ನ ಕಿಯಾ ಕಾರಿನಲ್ಲಿ ಮೂಡುಬಿದಿರೆ ಕಡೆಗೆ ಬರುತ್ತಿರುವಾಗ, ಮೂಡುಬಿದಿರೆ ಕಡೆಯಿಂದ ಚಿಕ್ಕಮಂಗಳೂರಿಗೆ ಕಡೆಗೆ ತೆರಳುತಿದ್ದ ತುಫಾನ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
