ಕಾರ್ಕಳ ವಿಧಾನ ಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಹಾಗೂ ಸಾವಿತ್ರಿ ಸತ್ಯವಾನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಮಮತಾ ಹೆಗ್ಡೆ ರವರು ಕಾರ್ಕಳ ತಾಲೂಕಿನ ಎಣ್ಣೆ ಹೊಳೆಯ ಸುಮಾರು 138 ಕೋಟಿಯ ಕಳಪೆ ಕಾಮಗಾರಿಯನ್ನು ವೀಕ್ಷಿಸಿದರು.ಎಣ್ಣೆ ಹೊಳೆಯ ಅಣೆಕಟ್ಟಿನ ಕಾಮಗಾರಿಯು ಕಳಪೆ ದರ್ಜೆಯ ಕಾಮಗಾರಿಯಾಗಿದ್ದು , ತೆರಿಗೆದಾರರ ಹಣವನ್ನು ದುರುಪಯೋಗ ಮಾಡಲಾಗಿದೆ ಎಂದು ಮಮತಾ ಹೆಗ್ಡೆ ಅವರು ದೂರಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣ ಖರ್ಚು ಮಾಡಿದರೂ ಕಾರ್ಕಳಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗದಿರುವುದು ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಮಮತಾ ಹೆಗ್ಡೆ ಅವರು ಆರೋಪಿಸಿದ್ದಾರೆ.
ಎಣ್ಣೆಹೊಳೆ ಕಳಪೆ ಕಾಮಗಾರಿ : ಡಾ.ಮಮತಾ ಹೆಗ್ಡೆ ಆರೋಪ
RELATED ARTICLES
