ತೋಕೂರು : ಮೇ.1ರವರೆಗೆ ನಡೆಯಲಿರುವ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆ ಎಸ್. ಕೋಡಿ, ತೋಕೂರು ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಪ್ರಾಯೋಜಕತ್ವದಲ್ಲಿ ಆಧಾರ್ ಸೇವಾ ಕೇಂದ್ರ ಮಂಗಳೂರು ಸಹಭಾಗಿತ್ವದಲ್ಲಿ ದಿನಾಂಕ 27.04.2025 ರಿಂದ 30.04.2025 ರ ವರೆಗೆ ಹಮ್ಮಿಕೊಂಡಿದ್ದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಕ್ಕೆ ಬಹಳ ಉತ್ತಮ ಸ್ಪಂದನೆ ದೊರಕಿದ್ದು,ಬಹು ಜನರ ಅಪೇಕ್ಷೆಯ ಮೇರೆಗೆ ಒಂದು ದಿನ ಹೆಚ್ಚುವರಿಯಾಗಿ ಅಂದರೆ ದಿನಾಂಕ 01.05.2025 ಶಿಬಿರವನ್ನು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಎಸ್.ಕೋಡಿ, ತೋಕೂರು ಇಲ್ಲಿ ನೆರವೇರಿಸುವುದಾಗಿ ತೀರ್ಮಾನಿಸಲಾಗಿದೆ.



ಹೆಚ್ಚಿನ ಜನತೆ ಸದುಪಯೋಗ ಪಡೆದುಕೊಂಡು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಗೌರವಾಧ್ಯಕ್ಷರು/ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ( ರಿ), ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆ, ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಎಸ್ ಕೋಡಿ, ತೋಕೂರು ಇವರುಗಳು ವಿನಂತಿಸಿದ್ದಾರೆ.
