HomeFresh Newsಲಯನ್ಸ್‌ ರಸ್ತೆ ಸುರಕ್ಷತೆ ಮತ್ತು ಅಪಘಾತ ನಿಯಂತ್ರಣ ವಿಭಾಗ ಜಿಲ್ಲಾ ಮುಖ್ಯ ಸಂಯೋಜಕರಾಗಿ ಲ. ಶಿವಪ್ರಸಾದ್...

ಲಯನ್ಸ್‌ ರಸ್ತೆ ಸುರಕ್ಷತೆ ಮತ್ತು ಅಪಘಾತ ನಿಯಂತ್ರಣ ವಿಭಾಗ ಜಿಲ್ಲಾ ಮುಖ್ಯ ಸಂಯೋಜಕರಾಗಿ ಲ. ಶಿವಪ್ರಸಾದ್ ಹೆಗ್ಡೆ

ಮೂಡುಬಿದಿರೆ: ಲ. ಶಿವಪ್ರಸಾದ್ ಹೆಗ್ಡೆ ಕಣಂಜಾರು ಅವರು ಲಯನ್ಸ್ ಜಿಲ್ಲಾ ಸಂಪುಟದಲ್ಲಿ ರಸ್ತೆ ಸುರಕ್ಷತೆ ಮತ್ತು ರಸ್ತೆ ಅಪಘಾತ ನಿಯಂತ್ರಣ ವಿಭಾಗದ ಮುಖ್ಯ ಜಿಲ್ಲಾ ಸಂಯೋಜಕರಾಗಿ ಆಯ್ಕೆಯಾಗಿದ್ದಾರೆ. ಲಯನ್ಸ್ ಕ್ಲಬ್‌ ಮೂಡುಬಿದರೆ ಇದರ ಸುವರ್ಣ ಮಹೋತ್ಸವ ವರ್ಷದ ಅಧ್ಯಕ್ಷರಾಗಿದ್ದ ಲ. ಶಿವಪ್ರಸಾದ್ ಹೆಗ್ಡೆ ಕಣಂಜಾರ್ ಎಂ ಜಿ ಎಫ್ ಅವರು ದ.ಕ., ಉಡುಪಿ ಜಿಲ್ಲೆ ಸಹಿತ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಶಾಲಾ ಕಾಲೇಜುಗಳು ಮತ್ತು ಇತರ ಸಂಘ ಸಂಸ್ಥೆಗಳಲ್ಲಿ ನಿರಂತರ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಪಾಲನೆ ಕುರಿತು ಕಾರ್ಯಾಗಾರಗಳನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಲಯನ್ಸ್ ಜಿಲ್ಲೆ 317ಡಿ ಇದರ ರಾಜ್ಯಪಾಲ ಲ. ಎಚ್.ಎಂ. ತಾರಾನಾಥ್ ಅವರು 2026 -27ರ ಅವಧಿಗೆ ಅವರನ್ನು ಜಿಲ್ಲಾ ಮಖ್ಯ ಸಂಯೋಜಕರಾಗಿ ಆಯ್ಕೆ ಮಾಡಿರುತ್ತಾರೆ.

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments