HomeFresh Newsಮೂಡುಬಿದರೆಯಲ್ಲಿ ಎಳ್ಳಮವಾಸ್ಯೆ ಪ್ರಯುಕ್ತ ತೀರ್ಥಸ್ನಾನ

ಮೂಡುಬಿದರೆಯಲ್ಲಿ ಎಳ್ಳಮವಾಸ್ಯೆ ಪ್ರಯುಕ್ತ ತೀರ್ಥಸ್ನಾನ

ಮೂಡುಬಿದಿರೆ: ಎಳ್ಳಮವಾಸ್ಯೆಯ ಪ್ರಯುಕ್ತ ಹನ್ನೆರಡು ಕವಲಿನಲ್ಲಿ ಸಾವಿರಾರು ಭಕ್ತರು ತೀರ್ಥಸ್ಥಾನ ಮಾಡಿದರು.

ಮೂಡುಬಿದಿರೆಯಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ತಾಕೊಡೆಯ ಬಳಿಯ ಹನ್ನೆರಡು ಕವಲಿನಲ್ಲಿ ಭಕ್ತರು ತೀರ್ಥಸ್ನಾನ ಮಾಡಿ ನಂತರ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಹಣ್ಣುಕಾಯಿ ಮಾಡಿ, ಪೂಜೆ ಸಲ್ಲಿಸಿ ತದ ನಂತರ ನದಿಯ ನಡುವಿನಲ್ಲಿರುವ ಪಂಚ ಮಹಾಲಿಂಗೇಶ್ವರ ದೇವಾಲಯಕ್ಕೆ ಪೂಜೆಗೈದು ನದಿಯಲ್ಲಿ ದಾನ ಬಿಟ್ಟು ದೇವರ ಕೃಪೆಗೆ ಪಾತ್ರರಾಗುತ್ತಾರೆ.

moodabidre


ಈ ದೇವಾಲಯದಲ್ಲಿ ವರ್ಷಾಂಪ್ರತಿಯು ಭಕ್ತರು ಮುಂಜಾನೆ 5 ಗಂಟೆಗೆ ಎಳ್ಳಮಾವಾಸ್ಯೆ ಸ್ನಾನಕ್ಕೆ ಬರಲಾರಂಭಿಸಿದರೆ ನಿರಂತರವಾಗಿ ದೂರದ ಊರುಗಳಿಂದ ಭಕ್ತಾಧಿಗಳು ಬಂದು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ದೂರ ಮಾಡೆಂದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಈ ದೇವಾಲಯದ ವಿಶೇಷತೆಯೇನೆಂದರೆ ಈ ದೇವಾಲಯದ ಸುತ್ತಲೂ ನದಿಗಳು ಹರಿಯುತ್ತಿರುವುದರಿಂದ ನಡುವಿನಲ್ಲಿ ಪಂಚ ಲಿಂಗಗಳನ್ನೊಳಗೊಂಡ ದೇಗುಲವಿದೆ. ಇಲ್ಲಿ ಮುಡಿ ತೆಗಿಯುವ ಕಾರ್ಯವೊಂದನ್ನು ಬಿಟ್ಟು ಎಲ್ಲಾ ಕಾರ್ಯಗಳು ನಡೆಯುತ್ತದೆ.

moodabidre

ಈ ದೇವಾಲಯವು ತೀರಾ ಹಳ್ಳಿಯ ನಡುವೆ ಇರುವುದರಿಂದ ಇಲ್ಲಿನ ಕಾರಣಿಕತೆಯ ಕುರಿತು ಜನರಿಗೆ ಅಷ್ಟೊಂದು ಮಾಹಿತಿ ತಿಳಿದಿಲ್ಲದಿದ್ದರೂ, ಇಲ್ಲಿ ಬಂದು ತಮ್ಮ ಕೋರಿಕೆಯನ್ನು ಈಡೇರಿಸಿಕೊಂಡವರ ಮಾತಿನಿಂದ ಇಲ್ಲಿ ಯಾವುದೇ ಪ್ರಚಾರವಿಲ್ಲದಿದ್ದರೂ ಹೆಚ್ಚು ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಇದೀಗ ಈ ದೇವಾಲಯದ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments