ಸುರತ್ಕಲ್‍ ; ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ಯುವಕ – ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ

ಸುರತ್ಕಲ್‍ನ ನಿವಾಸಿಯಾದ ಕಿರಣ್ ದೇವಾಡಿಗ ಎಂಬವರು ಅಪರೂಪದ ಎಲುಬು ಕ್ಯಾನ್ಸರ್‍ಗೆ ತುತ್ತಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಚಿಕತ್ಸೆಗಾಗಿ ಸಾವಿರಾರು ರೂಪಾಯಿ ಖರ್ಚಾಗಿದ್ದು, ಕಿರಣ್ ಮನೆಯವರು ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಸೋಮನಾಥ್ ದೇವಾಡಿಗ ಅವರು ಹುಟ್ಟು ಅಂಗವಿಕಲರಾಗಿದ್ದು, ವೃದ್ದಾಪ್ಯ ಹಾಗೂ ಸಂಕಷ್ಠದ ಸಮಯದಲ್ಲಿ ತನ್ನ ಒಬ್ಬನೇ ಮಗನಾದ 28 ವರ್ಷ ಪ್ರಾಯದ ಕಿರಣ್ ದೇವಾಡಿಗ ಅವರು ಅಪರೂಪದ ಎಲುಬು ಕ್ಯಾನ್ಸರ್‍ನಿಂದ ಬಳಲುತ್ತಿದ್ದಾರೆ. ಈಗಾಗಲೇ ಚಿಕಿತ್ಸೆಗೆ ಇದ್ದ ಹಣವನ್ನೆಲ್ಲಾ ವ್ಯಯಿಸಲಾಗಿದೆ. ಮುಂದಿನ ಚಿಕಿತ್ಸೆಗೆ ಹಣದ ಅಭಾವವಿದ್ದು, ದಾನಿಗಳ ಸಹಾಯದ ನಿರೀಕ್ಷೆಯನ್ನಿಟ್ಟಿದ್ದಾರೆ.

ನಿಮ್ಮ ಸಹಾಯವು ನನ್ನ ಮಗನಿಗೆ ಜೀವರಕ್ಷೆಯಾಗಲಿ ಎಂದು ತಂದೆ ಸೋಮನಾಥ ದೇವಾಡಿಗ ಅವರು ಮನವಿಯನ್ನು ಮಾಡಿಕೊಂಡಿದ್ದಾರೆ. ಕಿರಣ್ ದೇವಾಡಿಗ ಅವರಿಗೆ ಸಹಾಯ ಮಾಡಲಿಚ್ಚಿಸುವವರು

ಬ್ಯಾಂಕ್ ಖಾತೆದಾರರ ಹೆಸರು:- ಎಸ್. ಕಿರಣ್ ದೇವಾಡಿಗ
ಬ್ಯಾಂಕ್ ಎಕೌಂಟ್ ನಂ:-5932500100164001
ಐಎಫ್‍ಎಸ್‍ಸಿ ಕೋಡ್:- KARB0000593
ಎಮ್‍ಐಸಿಆರ್ ಕೋಡ್ :- 575052035
ಬ್ರಾಂಚ್ :- ಕೃಷ್ಣಾಪುರ, ಮಂಗಳೂರು
ಗೂಗಲ್ ಪೇ/ಫೋನ್ ಪೇ:- 8197345165 ಗೆ ನಿಮ್ಮ ಕೈಲ್ಲಾದ ಸಹಾಯವನ್ನು ಮಾಡಬಹುದು.

Related Posts

Leave a Reply

Your email address will not be published.