ಕೂಳೂರು ರಾಯಿ ಕಟ್ಟೆಯ ಪುರಾತನ ಅಶ್ವತ್ತ ಮರವೊಂದು ಜೂನ್ 6ರಂದು ಸುರಿದ ಭಾರಿ ಮಳೆಯಿಂದಾಗಿ ಧರೆಗುರುಳಿದಿದೆ.
ಇದು ಸುಮಾರು 150 ವರ್ಷಗಳಷ್ಟು ಹಳೆಯ ಮರವಿದಾಗಿದ್ದು ಪೂಜೆ ಪುರಸ್ಕಾರಗಳು ಈ ಮರದ ಕೆಳಗೆ ನಡೆಯುತಿತ್ತು. ಪಂಜಿಮೊಗರು ಗ್ರಾಮಸ್ಥರು ಈ ಮರವನ್ನು ಭಕ್ತಿ ಭಾವದಿಂದ ನೋಡುತಿದ್ದರು. ಅಲ್ಲದೆ ಅನೇಕ ಪಕ್ಷಿಗಳಿಗೆ ಆಶ್ರಯ ತಾಣವಾಗಿತ್ತು. ಇಂತಹದೇ ಮರವೊಂದು ಇಲ್ಲಿ ಬೆಳೆದು ನಿಲ್ಲಲಿ ಎಂಬುದು ಸ್ಥಳೀಯರ ಆಶಯವಾಗಿದೆ.


