ಜನತಾದಳ ಸೆಕ್ಯುಲರ್ ಪಕ್ಷದ ರಾಜ್ಯ ಮೀನುಗಾರರ ಘಟಕದ ಅಧ್ಯಕ್ಷರಾಗಿ ಮಂಗಳೂರಿನ ಶ್ರೀ ರತ್ನಾಕರ ಸುವರ್ಣ ಅವರು ಮರು ಆಯ್ಕೆಯಾಗಿದ್ದಾರೆ.
ಇಂದು ಬೆಂಗಳೂರಿನ ಜೆಪಿ ಭವನದಲ್ಲಿರುವ ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ H. D. Kumaraswamy ಅವರು ಶ್ರೀ ರತ್ನಾಕರ ಸುವರ್ಣ ಅವರಿಗೆ ನೇಮಕಾತಿ ಪತ್ರವನ್ನು ಅಧಿಕೃತವಾಗಿ ಹಸ್ತಾಂತರಿಸಿದರು.
ಮೀನುಗಾರ ಸಮುದಾಯದ ಪರ ಹೋರಾಟ, ಸಂಘಟನೆ ಹಾಗೂ ಸೇವಾ ಮನೋಭಾವದ ಮೂಲಕ ಗುರುತಿಸಿಕೊಂಡಿರುವ ಶ್ರೀ ರತ್ನಾಕರ ಸುವರ್ಣ ಅವರ ನೇತೃತ್ವದಲ್ಲಿ ರಾಜ್ಯದ ಮೀನುಗಾರರ ಸಮಸ್ಯೆಗಳಿಗೆ ಇನ್ನಷ್ಟು ಬಲವಾದ ಧ್ವನಿ ಸಿಗಲಿ ಎಂದು ಹಾರೈಸುತ್ತೇವೆ.
