Home Archive by category ರಾಷ್ಟ್ರೀಯ (Page 3)

ನೋಯ್ಡಾ:ವರದಕ್ಷಿಣೆ ಬಾಕಿಗೆ ಸುಟ್ಟು ಕೊಲೆ ಆರು ವರುಷದ ಮಗನೆದುರು ಹತ್ಯೆ

ನೋಯ್ಡಾದಲ್ಲಿ ವರದಕ್ಷಿಣೆ ಬಾಕಿಗಾಗಿ ಆರು ವರುಷದ ಮಗನ ತಾಯಿಯನ್ನು ಗಂಡನ ಮನೆಯವರು ಜೀವಂತ ಸುಟ್ಟು ಕೊಂದುದರ ಸಂಬಂಧ ಪೋಲೀಸರು ಮೂವರನ್ನು ಬಂಧಿಸಿದ್ದಾರೆ.ಆರು ವರುಷದ ಹುಡುಗನ ಹೇಳಿಕೆ ಹೀಗಿದೆ. ಮೊದಲು ಅವರ ಅಮ್ಮನ ಮೇಲೆ ಏನೋ ಸುರಿದರು. ಅನಂತರ ಕೆನ್ನೆಗೆ ಹೊಡೆದರು. ಅಪ್ಪ ಲೈಟರ್‌ನಿಂದ ಬೆಂಕಿ ಹಚ್ಚಿದಾಗ ಅಮ್ಮ ದಗದಗ ಬೆಂಕಿಯಲ್ಲಿ ಅರಚುತ್ತ ಸುಟ್ಟು ಹೋದಳು.

ಕುತ್ತಾರು ಸಮೀಪದ ದೇವಿಪುರದಲ್ಲಿ: ನಿರ್ಮಾಣಗೊಂಡ “ಭೀಮ ಸೌಧ” ಉದ್ಘಾಟನೆ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಹೇಳಿಕೆ

ಸಮುದಾಯ ಭವನಗಳಿಗೆ ಅಂಬೇಡ್ಕರ್ ಅವರ ಹೆಸರಿಡುವುದು ಮಾತ್ರ ಅಲ್ಲ, ಅವರ ತತ್ವ, ಆದರ್ಶಗಳನ್ನ ಯುವ ಪೀಳಿಗೆಗೂ ವರ್ಗಾಯಿಸುವ ಕಾರ್ಯ ಇಲ್ಲಿ ನಡೆಯಬೇಕು.ಅವರ ಅರ್ಧದಷ್ಟು ವ್ಯಕ್ತಿತ್ವವನ್ನಾದರೂ ನಾವು ಮೈಗೂಡಿಸಿ ಕೊಳ್ಳಬೇಕೆಂದು ಕರ್ನಾಟಕ ವಿದಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ,ದ.ಕ ಜಿಲ್ಲಾ ಪಂಚಾಯತ್ ,ಉಳ್ಳಾಲ ತಾಲೂಕು ಪಂಚಾಯತ್ ಹಾಗೂ ಮುನ್ನೂರು ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಕುತ್ತಾರು

ನೆಲ್ಯಾಡಿ : ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ “ಆಟಿದ ನೆಂಪುಡು ಸೋಣದ ಪೊಲಬು” ಕಾರ್ಯಕ್ರಮ ಶನಿವಾರ ದಂದು ನಡೆಯಿತು

ವಿದ್ಯಾಸಂಸ್ಥೆ ಸಂಚಾಲಕರಾದ ಫಾ. ನೋಮಿಸ್ ಕರಿಯಕೋಸ್ ದೀಪ ಬೆಳಗಿಸಿ ಉದ್ಘಾಟಿಸಿದರು ತುಳುನಾಡಿನ ವಿಶಿಷ್ಟ ಸಂಪ್ರದಾಯದ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬರುತ್ತಿದೆ. ಹಳೆಯ ಸಂಪ್ರದಾಯಗಳು ಮತ್ತೊಮ್ಮೆ ಮೇಲುಕು ಹಾಕುವ ಮೂಲಕ ವಿದ್ಯಾರ್ಥಿಗಳಿಗೆ ಈ ಮೂಲಕ ಅರಿವು ಮೂಡಿಸಲು ಸಾಧ್ಯ ಎಂದರು. ಮುಖ್ಯ ಅತಿಥಿಗಳಾಗಿ ಕೊಕ್ಕಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥ ರೈ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ನಮ್ಮ ಹಿರಿಯರು ನಡೆಸಿಕೊಂಡು ಬರುತ್ತಿದ್ದ

ಮಂಗಳೂರು : ಅಂತರಾಷ್ಟ್ರೀಯ ವೇದಿಕೆಯಲ್ಲಿ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಕೀರ್ತಿ ತಂದ ಮಂಗಳೂರಿನ 8 ವರ್ಷದ ಬಾಲಪ್ರತಿಭೆ ರುಶಭ್ ರಾವ್

ಅಂತರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆ (ಆಗಸ್ಟ್ 13ರಿಂದ 17, ವಿಯೆಟ್ನಾಂ)ನಲ್ಲಿ ನಡೆದಿತ್ತು ಈ ಸ್ಪರ್ಧೆಗೆ ಭಾರತದಿಂದ ಪ್ರತಿನಿಧಿಸಿದ ಬಾಲಪ್ರತಿಭೆ ರುಶಭ್ ರಾವ್ ಇಂದು ಮಂಗಳೂರಿಗೆ ಬಂದಿಲಿದಿದ್ದು ಮಂಗಳೂರಿನ ವಿಮಾನ ನಿಲ್ದಾಣ ದಲ್ಲಿ ಹೂಗುಚ್ಚ ನೀಡಿ ಕುಟುಂಸ್ಥರು ಸ್ವಾಗತಕೋರಿದರು.ಮಂಗಳೂರು ಕುಲಶೇಖರ ಮೂಲದ, ಕೇವಲ 8 ವರ್ಷದ ಬಾಲಪ್ರತಿಭೆ ರುಶಭ್ ರಾವ್, ಅಂತರಾಷ್ಟ್ರೀಯ ಫ್ಯಾಷನ್ ಮತ್ತು ಪ್ರತಿಭಾ ವೇದಿಕೆಯಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದಾನೆ. ಬೆಜೈಯ ಲೂರ್ಡ್ಸ್

ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಮಾಲಿಕತ್ವದ ಜೂಜು ಮನೆಗಳು,ಜಾರಿ ನಿರ್ದೇಶನಾಲಯದಿಂದ ಸಮಗ್ರ ದಾಳಿ

ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ವೀರೇಂದ್ರ ಮಾಲಿಕತ್ವದ ಮನೆ, ಕಚೇರಿ, ಜೂಜು ಅಡ್ಡೆಗಳು ಸೇರಿ ಇಡಿ- ಜಾರಿ ನಿರ್ದೇಶನಾಲಯವು 30 ಕಡೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು.ಶಾಸಕ ವೀರೇಂದ್ರ ಮತ್ತು ಅವರ ಸಹೋದರ ಬೆಟ್ಟಿಂಗ್ ಜಾಲ ನಡೆಸುತ್ತಿರುವುದಾಗಿ ಹೇಳಲಾಗಿದೆ. ಗೋವಾದಲ್ಲಿ ಕ್ಯಾಸಿನೋ ಹೊಂದಿರುವುದಾಗಿಯೂ, ಕ್ಯಾಸಿನೋಗಳ ಪಾಲುದಾರಿಕೆ ಹೊಂದಿರುವುದಾಗಿಯೂ, ಜೂಜು ಅಡ್ಡೆಗಳ ಮಾಲಕತ್ವ ಹೊಂದಿರುವುದಾಗಿಯೂ ಹೇಳಲಾಗುತ್ತಿದೆ. ಜಾರಿ

ಅತಿ ಹೆಚ್ಚು ಚಪ್ಪರೆ ಬದನೆ ಬೆಳೆಯುವ ದೇಶ ಮತ್ತುಅತಿ ಹೆಚ್ಚು ಟೊಮ್ಯಾಟೊ ರಫ್ತು ಮಾಡುವ ದೇಶ

ಮಧ್ಯ ಅಮೆರಿಕ ಮೂಲದ ಟೊಮ್ಯಾಟೊ ಇಲ್ಲವೇ ಚಪ್ಪರಬದನೆ ಯುರೋಪಿನಲ್ಲಿ ಹೆಚ್ಚು ಬಳಸುವರು ಹಾಗೂ ಏಶಿಯಾದಲ್ಲಿ ಹೆಚ್ಚು ಬೆಳೆಯುವರು.ಅತಿ ಹೆಚ್ಚು ಟೊಮ್ಯಾಟೊ ಬೆಳೆಯುವ ಮತ್ತು ರಫ್ತು ಮಾಡುವ ದೇಶವಾಗಿದೆ ಚೀನಾ. ಕ್ಸಿಂಜಿಯಾಂಗ್ ಟೊಮ್ಯಾಟೊ ತೋಟಗಾರಿಕೆ ಪ್ರಾಂತ್ಯವಾಗಿದೆ ಭಾರತ ಎರಡನೆಯ ಸ್ಥಾನದಲ್ಲಿದೆ. ಮಧ್ಯ ಪ್ರದೇಶ, ಕರ್ನಾಟಕ ಹೆಚ್ಚು ಬೆಳೆಯುವ ರಾಜ್ಯಗಳಾಗಿವೆ. ಚೀನಾವು ಪೇಸ್ಟ್, ಸಾಸ್, ಕ್ಯಾನಿಂಗ್ ರೂಪದಲ್ಲಿ ಹೆಚ್ಚು ರಫ್ತು ಮಾಡುತ್ತದೆ. ಅತಿ ಹೆಚ್ಚು ಟೊಮ್ಯಾಟೊ

ಅತಿ ಹೆಚ್ಚು ಬಣ್ಣಗಳು ಇರುವ ಬಾವುಟ ಯಾವ ದೇಶದ್ದು

ಬೆಲಿಜ್ ದೇಶದ ಬಾವುಟವು ಹನ್ನೆರಡು ಬಣ್ಣಗಳನ್ನು ಹೊಂದಿದೆ. ಭಾರತದ ಧ್ವಜದಲ್ಲಿ ನಾಲ್ಕು ಬಣ್ಣಗಳು ಇವೆ.ಸಾಮಾನ್ಯವಾಗಿ ಜಗತ್ತಿನ ಬಾವುಟಗಳು ಎರಡು ಇಲ್ಲವೇ ಮೂರು ಬಣ್ಣಗಳಲ್ಲಿ ಇರುತ್ತವೆ. ಅತಿ ಹೆಚ್ಚು ಬಣ್ಣಗಳ ವರ್ಣಮಯ ಬಾವುಟ ಬೆಲಿಜ್ ದೇಶದ್ದಾಗಿದೆ. ಇದರಲ್ಲಿ ಹನ್ನೆರಡು ಬಣ್ಣಗಳನ್ನು ಗುರುತಿಸಬಹುದು. ನೀಲಿ, ಕೆಂಪು, ಬಿಳಿ, ಕಪ್ಪು, ಕಂದು, ಹಳದಿ, ಹಸಿರು ಅಲ್ಲದೆ ಮಿಶ್ರ ಬಣ್ಣಗಳ ಧ್ವಜವಿದು.ಡೊಮಿನಿಕಾ, ಪೋರ್ಚುಗಲ್, ಸೌತ್ ಆಫ್ರಿಕಾದ ಧ್ವಜಗಳು ಆರು ಬಣ್ಣ

ಸುಪ್ರೀಂ ಕೋರ್ಟು ತೀರ್ಪು :ಬೀದಿ ನಾಯಿಗಳು ಮತ್ತೆ ಬೀದಿಗೆ ಬರಲಿ! ಬೀದಿಯಲ್ಲಿ ತಿನಿಸು ಕೊಡುವುದು ಅಪರಾಧ

ಬೀದಿ ನಾಯಿಗಳು ಮತ್ತೆ ಬೀದಿಗೆ ಬಂದು ತಿರುಗಾಡಬಹುದು ಆದರೆ ಬೀದಿಯಲ್ಲಿ ಬೀದಿ ನಾಯಿಗಳಿಗೆ ತಿನಿಸು ಕೊಡುವುದು ಅಪರಾಧ ಎಂದು ಸುಪ್ರೀಂ ಕೋರ್ಟು ಹಿಂದಿನ ತೀರ್ಪನ್ನು ಬದಲಿಸಿ ತೀರ್ಪಿತ್ತಿದೆ.ಎಲ್ಲ ಬೀದಿ ನಾಯಿಗಳಿಗೆ ನಾಯಿ ಮನೆ ಕಟ್ಟುವುದು ಕಷ್ಟ ಎಂದು ದಿಲ್ಲಿಯ ಬಿಜೆಪಿ ಸರಕಾರವು ಹೇಳಿತ್ತು. ನಾಯಿ ಪ್ರಿಯರುಗಳು ಬೀದಿ ನಾಯಿಗಳ ಮೇಲೆ ಕಠಿಣ ಕ್ರಮ ಸರಿಯಲ್ಲ ಎಂದು ವಾದಿಸಿದ್ದವು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ, ಎನ್. ವಿ. ಅಂಜಾರಿಯಾ

ಮಧ್ಯ ಪ್ರದೇಶ:ಎಲ್ಲರಿಗೂ ಎರಡು ಲಾಡು, ನನಗೆ ಒಂದು ಮುಖ್ಯಮಂತ್ರಿಗಳಿಗೆ ಸಾಮಾನ್ಯನಿಂದ ದೂರು

ಮಧ್ಯ ಪ್ರದೇಶದಲ್ಲಿ ಹಂಚಿದ ಲಾಡು ಪೊಟ್ಟಣದಲ್ಲಿ ಎಲ್ಲರಿಗೂ ಎರಡು ಲಾಡು ಸಿಕ್ಕರೆ, ಒಬ್ಬ ಸಾಮಾನ್ಯನಿಗೆ ಒಂದು ಲಾಡು ಸಿಕ್ಕಿತ್ತು. ಆತನು ಮುಖ್ಯಮಂತ್ರಿಗಳ ಸಹಾಯವಾಣಿಯಲ್ಲಿ ದೂರು ಸಲ್ಲಿಸಿದ; ಪಂಚಾಯತ್ ಒಂದು ಕಿಲೋ ಸಿಹಿ ತಪ್ಪು ದಂಡ ಕೊಟ್ಟಿತು.ಈ ಘಟನೆಯು ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯಲ್ಲಿಸ್ವಾತಂತ್ರ‍್ಯ ದಿನಾಚರಣೆಯಂದು ನಡೆದಿದೆ. ಕಮಲೇಶ್ ಕುಶ್ವಾಹನಿಗೆ ಮಾತ್ರ ಒಂದು ಲಾಡು ಕೊಡಲಾಗಿತ್ತು ಆತನು ಒಂದಿದೆ, ಎರಡು ಕೊಡಿ ಎಂದರೂ ಸಂಘಟಕರು ಕೊಟ್ಟಿಲ್ಲ. ಆತನು

ನದಿಗಳು ಇಲ್ಲದ ಪ್ರಪಂಚದ ಅತಿ ದೊಡ್ಡ ದೇಶ

ಜಗತ್ತಿನಲ್ಲಿ ನದಿಗಳು ಇಲ್ಲದ ಅತಿ ದೊಡ್ಡ ದೇಶವಾಗಿದೆ ಸೌದಿ ಅರೇಬಿಯಾ. ಬಾವಿ, ಒಯಸಿಸ್ ಸಾಕಾಗದ ಕಾಲವಿದು.ನದಿಗಳು ಇಲ್ಲದ ದೇಶಗಳು ಈಗ ಕುಡಿಯುವ ನೀರಿಗೆ ಡಿಸಾಲಿನೇಶನ್ ಎಂಬ ಉಪ್ಪುಕಳೆ ತಂತ್ರಜ್ಞಾನವನ್ನು ನಂಬಿವೆ. ಕೆಳಗಿನವುಗಳೆಲ್ಲ ನದಿಗಳು ಇಲ್ಲದ ದೇಶಗಳಾಗಿವೆ.ಸೌದಿ ಅರೇಬಿಯಾ 70 ಶೇಕಡಾ ಕುಡಿಯುವ ನೀರನ್ನು ಉಪ್ಪು ಕಳೆ ಮೂಲಕ ಪಡೆಯುತ್ತದೆ. ಅತಿ ಹೆಚ್ಚು ಎಂದರೆ 70 ಶೇಕಡಾ ಉಪ್ಪು ಕಳೆ ತಂತ್ರಜ್ಞಾನದ ಮೂಲಕ ಕುಡಿಯುವ ನೀರು ಪಡೆಯುವ ದೇಶ ಕತಾರ್.ಯುಎಇ- ಅರಬ್