ಮಲ್ಲಿಕಟ್ಟೆ ಶಿವಭಾಗ್ ವಾರ್ಡ್‌ನ ಪಾರ್ಕ್ ಅವ್ಯವಸ್ಥೆ – ನಾಗರಿಕರ ನಿರ್ಲಕ್ಷ್ಯದ ಪ್ರತಿಬಿಂಬ

ಪಾರ್ಕ್ ಉಳಿಸುವ ಹೊಣೆ ಯಾರದು ?

ನಗರದ ಮಲ್ಲಿಕಟ್ಟೆ ಶಿವಭಾಗ್ ವಾರ್ಡ್ ಸಂಖ್ಯೆ 34 ವ್ಯಾಪ್ತಿಯಲ್ಲಿ ಇರುವ ಪಾರ್ಕ್ ಇಂದು ಸಂಪೂರ್ಣ ಅವ್ಯವಸ್ಥೆಯ ಗೂಡಾಗಿದೆ. ಮಕ್ಕಳ ಆಟ, ಹಿರಿಯರ ವಾಕಿಂಗ್‌, ಸಾರ್ವಜನಿಕರ ವಿಶ್ರಾಂತಿಗಾಗಿ ನಿರ್ಮಿಸಲಾಗಿದ್ದ ಈ ಪಾರ್ಕ್‌ ಈಗ ಅಸ್ತವ್ಯಸ್ತ ಸ್ಥಿತಿಯಲ್ಲಿ ಕಂಡುಬರುತ್ತಿದೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಪಾರ್ಕ್‌ಗೆ ಬರುವ ನಾಗರಿಕರು ಅನೇಕ ಅನಾನುಕೂಲಗಳನ್ನು ಅನುಭವಿಸಬೇಕಾಗಿದ್ದು, ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ವಾಕಿಂಗ್‌ಗೆ ಬರುವವರು ನಿರಾಶರಾಗಿ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಾರ್ಕ್‌ನೊಳಗೆ ಹಾಗೂ ಸುತ್ತಮುತ್ತ ಕಸದ ರಾಶಿಗಳು, ಖಾಲಿ ಬಾಟಲ್‌ಗಳು ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಎಸೆಯಲ್ಪಟ್ಟಿರುವುದು ನೋಡುವುದೇ ಅಸಹ್ಯವಾಗುವಂತಿದೆ. ಈ ಅಸ್ವಚ್ಛತೆ ಆರೋಗ್ಯಕ್ಕೆ ಧಕ್ಕೆ ತರುವುದರ ಜೊತೆಗೆ ದುರ್ವಾಸನೆ ಹರಡುವಂತೆ ಮಾಡುತ್ತಿದೆ. ಮಕ್ಕಳು ಆಟವಾಡಲು ಭಯಪಡುವ ಸ್ಥಿತಿ ಉಂಟಾಗಿದ್ದು, ಹಿರಿಯ ನಾಗರಿಕರು ಪಾರ್ಕ್‌ಗೆ ಬರಲು ಹಿಂಜರಿಯುತ್ತಿದ್ದಾರೆ. ಸ್ವಚ್ಛ ವಾತಾವರಣ ನಿರೀಕ್ಷೆಯಲ್ಲಿದ್ದ ನಾಗರಿಕರಿಗೆ ಈ ಪಾರ್ಕ್ ಈಗ ತೊಂದರೆಯ ಕೇಂದ್ರವಾಗಿಬಿಟ್ಟಿದೆ.

ಇನ್ನಷ್ಟು ವಿಷಾದಕರ ಸಂಗತಿ ಎಂದರೆ, ಇಲ್ಲಿನ ನಾಗರಿಕರು ಈ ಪಾರ್ಕ್ ಉಳಿಸಲು ಯಾವುದೇ ಪ್ರಯತ್ನ ಮಾಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ‘ಬುದ್ಧಿವಂತರ ಊರು’ ಎನ್ನಿಸಿಕೊಂಡಿದ್ದರೂ ಕಣ್ಣು ಇದ್ದೂ ಕಾಣದವರಂತೆ ವರ್ತಿಸುತ್ತಿರುವುದು ಬೇಸರಕಾರಿಯಾಗಿದೆ. ಸಾರ್ವಜನಿಕ ಆಸ್ತಿಯನ್ನು ಕಾಪಾಡುವ ಜವಾಬ್ದಾರಿ ಎಲ್ಲರದ್ದಾಗಿದ್ದರೂ, ನಿರ್ಲಕ್ಷ್ಯ ಮನೋಭಾವವೇ ಮೇಲುಗೈ ಸಾಧಿಸಿದೆ. ಇದರ ಪರಿಣಾಮವಾಗಿ ಪಾರ್ಕ್‌ಗೆ ಬರುವ ನಾಗರಿಕರು ಮಾನಸಿಕ ಅಸಮಾಧಾನ ಹಾಗೂ ದೈಹಿಕ ಅನಾನುಕೂಲ ಅನುಭವಿಸುವಂತಾಗಿದೆ.

ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯರು ಎಚ್ಚೆತ್ತು ಪಾರ್ಕ್ ಸಂರಕ್ಷಣೆಗೆ ಮುಂದಾಗಬೇಕಾಗಿದೆ.

Related Posts

Leave a Reply

Your email address will not be published.