Home Posts tagged V4News (Page 850)

ಕರಾವಳಿಯಲ್ಲಿ ಸರಳ ನಾಗರ ಪಂಚಮಿ ಆಚರಣೆ : ದೇವಸ್ಥಾನದಲ್ಲಿ ಬೆರಳಣಿಕೆಯ ಭಕ್ತಾಧಿಗಳು

ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ನಾಗರಪಂಚಮಿಯನ್ನು ಇಂದು ಕರಾವಳಿಯಾದ್ಯಂತ ಆಚರಿಸಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ಆಚರಣೆ ಸರಳವಾಗಿದ್ದು, ನಗರದ ಪ್ರಮುಖ ನಾಗ ಸನ್ನಿಧಿಯಾದ ಕುಡುಪು ಸೇರಿದಂತೆ ದೇವಸ್ಥಾನ ಗಳಲ್ಲಿ ವೈದಿಕ ವಿಧಿ ವಿಧಾನಗಳು, ವಿಶೇಷ ಪೂಜೆಯೊಂದಿಗೆ ನಾಗಾರಾಧನೆ ನಡೆಯುತ್ತಿದೆ. ವಿಶೇಷ ಸೇವೆಗಳಿಗೆ ಅವಕಾಶ ಇಲ್ಲವಾಗಿದ್ದು,

ಕುರು ದ್ವೀಪದ ವಿದ್ಯಾರ್ಥಿನಿಯರನ್ನು ಅಭಿನಂದಿಸಲು ದೋಣಿ ಏರಿದ್ರು ಉಡುಪಿಯ ಡಿಡಿಪಿಐ!

ಕುಂದಾಪುರ: ಇತ್ತೀಚೆಗಷ್ಟೇ ದೋಣಿಯ ಮೂಲಕ ಪರೀಕ್ಷಾ ಕೇಂದ್ರಕ್ಕೆ ಸಾಗಿ ಎಸೆಸ್ಸೆಲ್ಸಿ ಪರೀಕ್ಷೆ ಬರೆದು ರಾಜ್ಯಾದ್ಯಂತ ಸುದ್ದಿಯಾದ ಮರವೆಂತೆಯ ಕುರು ದ್ವೀಪದ ವಿದ್ಯಾರ್ಥಿನಿಯರ ಮನೆಗೆ  ಡಿಡಿಪಿಐ ಭೇಟಿ ನೀಡಿ ಶುಭ ಹಾರೈಸಿದ್ದಾರೆ. ಉಡುಪಿ ಡಿಡಿಪಿಐ ಎನ್ ಎಚ್ ನಾಗೂರ ಹಾಗೂ ಶಿಕ್ಷಣಾ ಇಲಾಖೆಯ ಅಧಿಕಾರಿಗಳು ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದ್ಚಿತೀಯ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿ ಸಂಜನಾ ಮತ್ತು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣಳಾದ ಶಿಲ್ಪಾ ಅವರನ್ನು

ಸೋನು ಸೂದ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಉಳ್ಳಾಲದಲ್ಲಿ ಆಕ್ಸಿಜನ್ ಪ್ಲ್ಯಾಂಟ್

ಸೋನು ಸೂದ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಉಳ್ಳಾಲದಲ್ಲಿ ಆಕ್ಸಿಜನ್ ಪ್ಲ್ಯಾಂಟ್ ನಿರ್ಮಾಣವಾಗಲಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಥಾಪನೆ ಆಗಲಿದೆ. ನಟ ಸೋನು ಸೂದ್ ನಮ್ಮ ಭಾಗಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ.ಇದು ನನಗೆ ಮತ್ತು ನಮ್ಮ ಕ್ಷೇತ್ರದ ಜನರಿಗೆ ಸಿಹಿ ಸುದ್ದಿಯಾಗಿದೆ. ಇನ್ನೂ 60ಲಕ್ಷ ನಟ ಸೋನು ಸೂದ್ ಉಳಿದ 40ಲಕ್ಷ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊಟ್ಟಿದೆ. ನಮ್ಮ ಕ್ಷೇತ್ರದ ಜನರ ಪರವಾಗಿ

ಸಂಪೂರ್ಣ ಹದಗೆಟ್ಟ ಅಮ್ಮುಂಜೆ ರಸ್ತೆ ಅಭಿವೃದ್ಧಿಗೆ ಅಮ್ಮುಂಜೆ ಗ್ರಾಮಸ್ಥರ ಆಗ್ರಹ

ಪುತ್ತೂರು: ಪುತ್ತೂರಿನ ಆರ್ಯಾಪು ಗ್ರಾಮ ಪಂಚಾಯತ್‍ಗೆ ಒಳಪಟ್ಟ ಕುರಿಯ ಗ್ರಾಮದ ಒಂದನೇ ವಾರ್ಡ್ ನ ನೈತ್ತಾಡಿ ಅಮ್ಮುಂಜೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚರಿಸಲು ಅಯೋಗ್ಯವೆನಿಇಸದೆ. ಈ ರಸ್ತೆಯು ಸರಿಸುಮಾರು ಎರಡು ಕೀಲೊ ಮಿಟರ್ ಇರುವ ರಸ್ತೆಯಾಗಿದು, ಅಮ್ಮುಂಜೆ ಗ್ರಾಮವಾಸಿಗಳನ್ನು ಮುಖ್ಯ ರಸ್ತೆಗೆ ಸೇರಿಸುವ ರಸ್ತೆಯಿದು. ಈ ರಸ್ತೆಯು ಮಳೆಯಿಂದಾಗಿ ಕೆಸರುಮಾಯವಾಗಿದು ತುಂಬಾ ಹದಗೆಟ್ಟು ಸಂಚಾರಕ್ಕೆ ಯೋಗ್ಯವಲ್ಲದಾಗಿದೆ. ಈ ರಸ್ತೆಯ ಸ್ಥಿತಿಗತಿಗಳ ಬಗ್ಗೆ

ಮಂಗಳೂರಿನಲ್ಲಿ ಎನ್‍ಐಎ ಕಚೇರಿ ಆರಂಭ ವಿಚಾರ : ಸಿಎಂ ಬಸವರಾಜ್ ಬೊಮ್ಮಾಯಿ

ಮಂಗಳೂರು: ಕರಾವಳಿಯಲ್ಲಿ ಉಗ್ರರ ನಂಟಿನ ಬಗ್ಗೆ ಎನ್‍ಐಎ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ ಬಳಿಕ ಮಂಗಳೂರಿನಲ್ಲಿ ಎನ್‍ಐಎ ಕಚೇರಿ ಆರಂಭಿಸಲು ಆಗ್ರಹ ಕೇಳಿ ಬಂದಿತ್ತು. ಇದೀಗ ಮಂಗಳೂರಿನಲ್ಲಿ ಎನ್‍ಐಎ ಕಚೇರಿ ಆರಂಭಿಸುವ ಕುರಿತಂತೆ ಸಭೆಗಳು ನಡೆದಿವೆ ಎಂದು ಎನ್‍ಐಎ ಕಚೇರಿ ಆರಂಭಿಸುವ ಸಾಧ್ಯತೆ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ಈಗಾಗಲೇ ಒಬ್ಬ ದಕ್ಷ ಗೃಹ ಸಚಿವರನ್ನು ಮಾಡಲಾಗಿದೆ. ಎನ್‍ಐಎ ಕುರಿತಂತೆ ಅವರು

 ಹುಕ್ಕಾ ಬಾರ್ ಪದ ಬಳಕೆ ವಿಚಾರ: ಸಿ.ಟಿ ರವಿ ಅವರ ಸಂಸ್ಕೃತಿ ಜನರಿಗೆ ಗೊತ್ತಾಗುತ್ತೆ:ಮಾಜಿ ಸಚಿವ ಯು.ಟಿ ಖಾದರ್

ಸಿ.ಟಿ.ರವಿಯಿಂದ ಹುಕ್ಕಾ ಬಾರ್ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಯು.ಟಿ.ಖಾದರ್ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅವರು ಮಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಮುವಾದದ ಅಫೀಮು ನಲ್ಲಿರುವವರು ಸಿ.ಟಿ.ರವಿಯವರು. ಇಂತಹ ಹುಕ್ಕಾ ಬಾರ್ ನಂತ ಪದ ಬಳಕೆ ಮಾಡತ್ತಾರೆ.ಇದರಿಂದ ಸಿ.ಟಿ ರವಿ ಅವರ ಸಂಸ್ಕೃತಿ ಜನರಿಗೆ ಗೊತ್ತಾಗುತ್ತದೆ. ಹುಕ್ಕಾ ಬಾರ್ ಕೂಡ ಅಫೀಮು. ಸಿ.ಟಿ.ರವಿ ಅದರ ಅಫೀಮುನಲ್ಲಿದ್ದಾರೆ ಎಂದು ಮಾಜಿ ಸಚಿವ ಯು.ಟಿ ಖಾದರ್

ತಲಪಾಡಿ ಗಡಿಯಲ್ಲಿ ಮುಂದುವರಿದ ಪ್ರತಿಭಟನೆ: ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ರದ್ದು

ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವವರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಿದ ಕರ್ನಾಟಕ ಸರ್ಕಾರದ ಆದೇಶದ ವಿರುದ್ಧ ತಲಪಾಡಿ ಗಡಿಯಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದು ಇಂದು ಕೂಡ ಮಂಜೇಶ್ವರ ಪಂಚಾಯತ್ ಯುಡಿವೈಎಫ್ ಈ ಸಮಿತಿಯ ನೇತೃತ್ವದಲ್ಲಿ ಕಪ್ಪು ಮಾಸ್ಕ್ ಧರಿಸಿ ಪ್ರತಿಭಟನೆ ನಡೆಯಿತು. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ತಲಪಾಡಿ ಗಡಿ ಪ್ರದೇಶಕ್ಕೆ ಭೇಟಿ ನೀಡುವ ಮಾಹಿತಿಯಂತೆ ಕೇರಳ ಭಾಗದಲ್ಲಿ ಪ್ರತಿಭಟನೆ ಸಜ್ಜುಗೊಂಡಿತ್ತು.

ಹರಿಕೃಷ್ಣ ಪುನರೂರು ಪದ್ಮಶ್ರೀ ಪ್ರಶಸ್ತಿಗೆ ಸೂಕ್ತ ಆಯ್ಕೆ: ನಿಮ್ಮೆಲ್ಲರ ಬೆಂಬಲವಿರಲಿ

ಸಮಾಜ ಸೇವೆ, ಬಾಲಕಾರ್ಮಿಕರ ಬಗ್ಗೆ ಕಾಳಜಿ ಶಿಕ್ಷಣ ಪ್ರೇಮಿ,ಕೃಷಿ,ಆರೋಗ್ಯ ಕ್ಷೇತ್ರ, ಸಾಮಾಜಿಕ,ವಿಧವಾ ವಿವಾಹ, ವಸತಿ, ಧಾರ್ಮಿಕ, ಕನ್ನಡ ನಾಡು ನುಡಿ ಸೇವೆ ಹೀಗೆ ಹತ್ತು ಹಲವು ಕ್ಷೇತ್ರ ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಪುನರೂರು . ಆಡು ಮುಟ್ಟದ ಸೊಪ್ಪಿಲ್ಲ ಪುನರೂರು ಸೇವೆ ಸಲ್ಲಿಸದ ಕ್ಷೇತ್ರ ಗಳಿಲ್ಲ. ಕನ್ನಡ ನಾಡಿನ ಕನ್ನಡ ಮನಸ್ಸುಗಳಲ್ಲಿ ಮನೆ ಮಾಡಿರುವ ಕರಾವಳಿ ಭಾಗದ ಕನ್ನಡ ಸೇವಕ ಧರ್ಮದರ್ಶಿ ಹರಿಕೃಷ್ಣ ಪುನರೂರು ಈ ನಾಡಿನ ಕನ್ನಡ ಮನಸ್ಸುಗಳ ಮೇಲೆ ಅವರು

ಉಡುಪಿ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ: ಹೆಜಮಾಡಿಯಲ್ಲಿ ಅದ್ಧೂರಿಯ ಸ್ವಾಗತ

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಬಸವರಾಜ್ ಬೊಮ್ಮಾಯಿ ಅವರನ್ನು ಜಿಲ್ಲೆಯ ಗಡಿಭಾಗದ ಹೆಜಮಾಡಿಯಲ್ಲಿ ಸಾಂಪ್ರದಾಯಿಕವಾಗಿ ಮಹಿಳೆಯರು ಆರತಿ ಎತ್ತಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಭದ್ರತೆಯ ದೃಷ್ಠಿಯಿಂದ ಉಡುಪಿ ಜಿಲ್ಲಾ ಗಡಿಭಾಗ ಹೆಜಮಾಡಿ ಟೋಲ್ ಗೇಟ್ ಬಳಿಯ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಪೆÇಲೀಸರು ಮುಚ್ಚಿಸಿದ್ದರು. ಮುಖ್ಯಮಂತ್ರಿಗಳಿಗೆ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಸಹಿತ ಉನ್ನತ ಪೆÇಲೀಸ್

ತರಾತುರಿಯಲ್ಲಿ ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನ ಉದ್ಘಾಟನೆ : ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಪ್ರತಿಭಟನೆ

ತರಾತುರಿಯಲ್ಲಿ ಜಿಲ್ಲಾ ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ದಲಿತ ಸಂಘಟನಾ ಮುಖಂಡರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ನಡೆಸಿದ್ರು. ಇಂದು ಮಂಗಳೂರಿನ ಉರ್ವಸ್ಟೋರ್‍ನಲ್ಲಿ ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನ ಉದ್ಘಾಟನೆಯನ್ನ ಸಿಎಂ ಬೊಮ್ಮಾಯಿ ಅವರು ನೆರವೇರಿಸಿದರು. ಅದ್ರೆ ಹೋರಾಟ ಮಾಡಿದರನ್ನ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿಲ್ಲ, ಜೊತೆಗೆ ಅವರನ್ನ ಗುರುತಿಸುವ ಕೆಲಸವನ್ನ ಕೂಡ ಅಧಿಕಾರಿಗಳು