ಉಪ್ಪಿನಂಗಡಿ: ಸಮುದಾಯ ಆರೋಗ್ಯ ಕೇಂದ್ರ,ಆರೋಗ್ಯ ರಕ್ಷಾ ಸಮಿತಿ ಸಭೆ

ಪುತ್ತೂರು: ಸಮುದಾಯ ಆರೋಗ್ಯ ಕೇಂದ್ರಗಳು ಜನ ಸ್ನೇಹಿಯಾಗುವ ಮೂಲಕ ಜನರಿಗೆ ಹತ್ತಿರವಾಗಬೇಕು, ಚಿಕಿತ್ಸೆಗೆ ಬರುವ ಪ್ರತೀಯೊಬ್ಬ ನಾಗರಿಕನಿಗೂ ಉತ್ತಮ ಸೇವೆ ಸಿಗಬೇಕು, ಯಾವುದೇ ಲೋಪ ದೋಷಗಳು ಬಾರದಂತೆ ಎಚ್ಚರವಹಿಸಬೇಕು  ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಆರೋಗ್ಯ ಕೇಂದ್ರದಲ್ಲಿನ ಸಿಬಂದಿಗಳಿಗೆ ರಕ್ಷಾ ಸಮಿತಿಗೆಮಹತ್ತರವಾದ ಜವಾಬ್ದಾರಿ ಇದೆ. ಕೇಂದ್ರಕ್ಕೆ ಬರುವ ಪ್ರತೀಯೊಬ್ಬ ರೋಗಿಗೂ ಸಾಂತ್ವನ ದೊರೆಯಬೇಕು. ಸೌಲಭ್ಯ ಇಲ್ಲ, ವೈದ್ಯರಿರಲಿಲ್ಲ ಎಂಬ ದೂರುಗಳು ಬರಬಾರದು. ಜನರೊಂದಿಗೆ ಬೆರೆಯುವ ಮೂಲಕ ಜನ ಸೇವೆಯನ್ನು ಮಾಡಬೇಕು ಎಂದು ಹೇಳಿದರು.

ರಕ್ಷಾ ಸಮಿತಿಯವರು ಏನು ಮಾಡಬೇಕು?

ಆರೋಗ್ಯ ರಕ್ಷಾಸಮಿತಿಯವರಿಗೆ ಕೇಂದ್ರದಲ್ಲಿ ಮಹತ್ತರವಾದ ಜವಾಬ್ದಾರಿ ಇದೆ. ಇಲ್ಲಿನ ಕೊರತೆಗಳನ್ನು ನೀಗಿಸುವಲ್ಲಿಮುತುವರ್ಜಿ ವಹಿಸಿ ಕೆಲಸ ಮಾಡಬೇಕು.  ಕೇಂದ್ರಕ್ಕೆ ಬರುವ ಪ್ರತೀಯೊಬ್ಬರಿಗೂ ಉತ್ತಮ ಸೇವೆ ದೊರೆಯುವಂತೆ ಮಾಡಬೇಕು. ಸ್ಥಳೀಯ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಆರೋಗ್ಯಕ್ಕೆ ಸಂಬಂದಿಸಿದಂತೆ ಕ್ಯಾಂಪ್ ಗಳನ್ನು ಮಾಡಿ ಜನರಿಗೆ ಸೇವೆ ನೀಡಬೇಕು. ಜನ ಈ ಕೇಂದ್ರದಿಂದ ಏನು ಬಯಸುತ್ತಾರೋ ಅದನ್ನು ಕೊಡಿಸುವಲ್ಲಿ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಇಲ್ಲಿಏನೆಲ್ಲಾ ಸೌಲಭ್ಯಗಳು ಬೇಕೋ ಅದನ್ನು ಪಡೆದುಕೊಳ್ಳುವ ಕೆಲಸವನ್ನುಮಾಡಬೇಕು ಎಂದು ಶಾಸಕರು ಹೇಳಿದರು.

 ಉಪ್ಪಿನಂಗಡಿಗೆ ಡಯಾಲಿಸಿಸ್ ಕೇಂದ್ರ

ಉಪ್ಪಿನಂಗಡಿಗೆ ಡಯಾಲಿಸಿಸ್ ಕೇಂದ್ತಕ್ಕೆ ಮಂಜೂರಾತಿ ದೊರಕಿದ್ದುಮುಂದಿನದಿನಗಳಲ್ಲಿ ಡಯಾಲಿಸಿಸ್ ಕೇಂದ್ರ ಉಪ್ಪಿನಂಗಡಿ ಸಮುದಾಯ ಕೇಂದ್ರದಲ್ಲಿ ಪ್ರಾರಂಭವಾಗಲಿದೆ ಎಂದು ಶಾಸಕರು ಹೇಳಿದರು. ಶಸ್ತ್ರ ಚಿಕಿತ್ಸಾ ಕೊಠಡಿಯ ಮಂಜೂರು ಮಾಡುವ ಬಗ್ಗೆ ಆರೋಗ್ಯ ಸಚಿವರ ಜೊತೆ ಮಾತನಾಡಿದ್ದೇನೆ ಮತ್ತು ಇದಕ್ಕಾಗಿ ಪ್ರಸ್ತಾವವನೆಯನ್ನು ಕಳುಹಿಸಲಾಗಿದೆ. ಉಪ್ಪಿನಂಗಡಿ ಬೆಳೆಯುತ್ತಿರುವ ಪಟ್ಟಣವಾದ್ದರಿಂದ ಇಲ್ಲಿ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರದ ಅಗತ್ಯವಿದೆ. ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ಇಲ್ಲಿ ಯಾವುದೂ ಇಲ್ಲ ಎಂಬ ಮನೋಭಾವ ಬರಬಾರದು ಎಂದು ಶಾಸಕರು ಹೇಳಿದರು.

ಅಂಬುಲೆನ್ಸ್ ತಿಂಗಳಿಗೆ 3 ಸೇವೆ?

ಉಪ್ಪಿನಂಗಡಿಯಲ್ಲಿರುವ ಅಂಬುಲೆನ್ಸ್ ಒಂದು ತಿಂಗಳಲ್ಲಿಮೂರು ಸಾರಿ ಓಡಿದೆ ಸಾಕಾ? ಸರಕಾರ ಉಚಿತವಾಗಿ ಈ ಸೇವೆಯನ್ನು ಜನರಿಗೆ ನೀಡಿದೆ. ಜನರುತುರ್ತು ಸಂದರ್ಬದಲ್ಲಿ ಜನ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಉಚಿತ ಅಂಬುಲೆನ್ಸ್ ವ್ಯವಸ್ಥೆಯ ಬಗ್ಗೆ ಜನರಿಗೆ ತಿಳಿಸಬೇಕು ಎಂದುಶಾಸಕರು ಹೇಳಿದರು. ಸಮುದಾಯ ಆರೋಗ್ಯ ಕೇಂದ್ರದ ಬಳಿ ಎರಡು ಆಂಬುಲೆನ್ಸ್ ಇದ್ದು ಇದು ಜನರ ಸೇವೆಗೆಂದು ಸರಕಾರ ನೀಡಿದೆ. ನಾನು ಇಲ್ಲಿಗೆಂದು ಸುಮಾರು ನ೧೮ ಲಕ್ಷ ವೆಚ್ಚದ ಹೊಸ ಅಂಬುಲೆನ್ಸ್ ಒದಗಿಸಿದ್ದೇನೆ ಅದು ಎಲ್ಲರಿಗೂ ಉಚಿತವಾಗಿಯೇ ಇರುತ್ತದೆ. ಯಾವುದೇ ಆಸ್ಪತ್ರೆಗೆ ತೆರಳುವುದಾದರೂ ಜನ ಇದನ್ನು ಬಳಸಿಕೊಳ್ಳಿ ಎಂದು ಶಾಸಕರು ಹೇಳಿದರು.

ಅಗತ್ಯ ಬಿದ್ದರೆ ಜನೌಷಧಿ ಕೇಂದ್ರ ತೆರವು

ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿದ ಕಟ್ಟಡದಲ್ಲಿ ಉಚಿತವಾಗಿ ಜನೌಷಧಿ ಕೇಂದ್ರಕ್ಕೆ ಕೊಠಡಿಯನ್ನು ನೀಡಿದ್ದು ಸರಿಯಲ್ಲ. ಇದು ಸರಕಾರದ ಸೊತ್ತು. ಆರೋಗ್ಯ ಕೇಂದ್ರಕ್ಕೆ ಡಯಾಲಿಸಿಸ್ ಕೇಂದ್ರ ಆರಂಭವಾಗುವ ಕಾರಣಕ್ಕೆ ಜನೌಷಧಿ ಕೇಂದ್ರವನ್ನು ತೆರವು ಮಾಡುವಂತೆ ವೈದ್ಯರಿಗೆ ಶಾಸಕರು ಸೂಚನೆಯನ್ನು ನೀಡಿದರು.

 ಉಪ್ಪಿನಂಗಡಿಗೆ ಇಂದಿರಾ ಕ್ಯಾಂಟೀನ್ ಬೇಕು

ಉಪ್ಪಿನಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಿ ಎಂದು ವೈದ್ಯಾಧಿಕಾರಿ ಕೃಷ್ಣಾನಂದ ಶಾಸಕರಲ್ಲಿ ಮನವಿ ಮಾಡಿದರು. ಈಗಾಗಲೇ ವಿಟ್ಲಕ್ಕೆ ಇಂದಿರಾ ಕ್ಯಾಂಟೀನ್ ಮಂಜೂರಾಗಿದೆ ಮುಂದಿನ ದಿನಗಳಲ್ಲಿ ಪರಿಶೀಲನೆ ಮಾಡುವ ಎಂದು ಶಾಸಕರು ತಿಳಿಸಿದರು.

 ತಾಳ್ಮೆಯಿಂದ ವರ್ತಿಸಿ

ಜನರು ನೋವನ್ನು ಹೊತ್ತುಕೊಂಡು ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಅವರು ಇಲ್ಲಿಗೆ ಬರುವಾಗ ತುಂಬಾ ಟೆನ್ಸ್ಯನ್‌ನಲ್ಲಿ ಇರುತ್ತಾರೆ ಆ ವೇಳೆ ಕೆಲವರು ಎನೇನೋ ಮಾತನಾಡಬಹುದು ಆ ವೇಳೆ ಇಲ್ಲಿನ ಸಿಬಂದಿಗಳಾಗಲಿ, ರಕ್ಷಾ ಸಮಿತಿಯರವರಾಗಲಿ ತಾಳ್ಮೆ ಕಳೆದುಕೊಳ್ಳದೆ ಸಂಯಮದಿಂದ ವರ್ತಿಸಬೇಕು. ಅನಗತ್ಯವಾಗಿ ಕಿರುಕುಳ ನೀಡಿದ್ದಲ್ಲಿ ಅಂಥವರ ವಿರುದ್ದ ಪೊಲೀಸರಿಗೆ ದೂರು ಕೊಡಿ ಎಂದು ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ , ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸಿದ್ದಿಕ್ ಕೆಂಪಿ, ಜಯಶೀಲ, ಆನಂದ, ಹಾದಿ ಕೆಂಪಿ, _ಫಾರೂಕ್ ಜಿಂದಗಿ, ವೈದ್ಯರುಗಳಾದ ಡಾ.ಸ್ಮಿತಾ,ಡಾ ಮನೋಜ್ ಉಪಸ್ಥಿತರಿದ್ದರು.  ಸಿಬಂದಿ ರೇಖಾ ಸ್ವಾಗತಿಸಿದರು, ಗೀತಾ ವಂದಿಸಿದರು. ಪ್ರವೀಣ್ ಮತಾಯಿಸ್ ಕಾರ್ಯಕ್ರಮ‌ ನಿರೂಪಿಸಿದರು

Related Posts

Leave a Reply

Your email address will not be published.